Recent Posts

Saturday, April 25, 2026
ಸುದ್ದಿ

ಪಾಕಿಸ್ತಾನದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಬಾಂಗ್ಲಾ ಗಡಿಯಲ್ಲೂ  ಹೈ ಅಲರ್ಟ್ ಘೋಷಿಸಿದ ಭಾರತ – ಕಹಳೆ ನ್ಯೂಸ್

ನವದೆಹಲಿ : ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರ ಬಾಂಗ್ಲಾ ಗಡಿಯಲ್ಲೂ ಸೇನೆ ಎಚ್ಚರಿಕೆ ವಹಿಸಿದೆ. ಪಾಕಿಸ್ತಾನದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ಗಡಿಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಗುಪ್ತಚರ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಹಮ್ಮದ್‌ ಯೂನುಸ್‌‍ ನೇತೃತ್ವದ ಸರ್ಕಾರದ ಕ್ರಮಗಳು ಮತ್ತು ಪಾಕಿಸ್ತಾನದ ಐಎಸ್‌‍ಐ ಮತ್ತು ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳ ಹೆಚ್ಚುತ್ತಿರುವ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶ ಗಡಿಯುದ್ದಕ್ಕೂ ಹೆಚ್ಚು ಜಾಗರೂಕರಾಗಿರಲು ಏಜೆನ್ಸಿಗಳಿಗೆ ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕಿಸ್ತಾನವು ಅಲ್ಲಿನ ತೀವ್ರಗಾಮಿ ಇಸ್ಲಾಮಿಕ್‌ ಗುಂಪುಗಳೊಂದಿಗೆ ಬಾಂಗ್ಲಾದೇಶದ ಸಹವರ್ತಿಗಳೊಂದಿಗೆ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ.ಬಾಂಗ್ಲಾದೇಶದ ಗಡಿಯಲ್ಲಿರುವ ಭಾರತೀಯ ಪ್ರದೇಶಗಳಲ್ಲಿ ಬೆಂಬಲ ನೆಲೆಯನ್ನು ಹೊಂದಿರುವ ಈ ತೀವ್ರಗಾಮಿ ಅಂಶಗಳನ್ನು ಪಾಕಿಸ್ತಾನವು ಭಾರತಕ್ಕೆ ತೊಂದರೆ ಸೃಷ್ಟಿಸಲು ಬಳಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಇಂತಹ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.