Saturday, April 25, 2026
ಸುದ್ದಿ

ಕಿರುಕುಳ ಕಾರಣಕ್ಕಾಗಿ ರಿಕ್ಷಾ ಚಾಲಕನಿಗೆ ಹಲ್ಲೆ: ಯುವಕ ಸಾವು – ಕಹಳೆ ನ್ಯೂಸ್

ಪಡುಬಿದ್ರಿ: ಫೋನ್ ಮಾಡಿ ಕಿರುಕುಳ ನೀಡ್ತಾ ಇದ್ದ ಎಂಬ ಕಾರಣಕ್ಕೆ ಯುವತಿಯೊಬ್ಬಳು ತಂದೆಯ ಜೊತೆಗೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾಳೆ. ಹಲ್ಲೆ ನಡೆಸಿದ ತಕ್ಷಣವೇ ಯುವಕ ಮೃತ ಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.

ಪಡುಬಿದ್ರಿಯಲ್ಲಿ ರಿಕ್ಷಾ ಚಾಲಕನಾಗಿ ಕಾರ್ಯ ನಿರ್ವಹಿಸುತ್ತ ಇದ್ದ ದಿನೇಶ್ ಎಂಬ ವ್ಯಕ್ತಿಗೆ ಜೀನತ್ ಮತ್ತು ಅವಳ ತಂದೆ ಇಬ್ರಾಹಿಂ ಪಡುಬಿದ್ರೆ ಬಸ್ ತಂಗುದಾನದಲ್ಲಿ ಹಲ್ಲೆ ನಡೆಸಿದ್ದು ತಕ್ಷಣವೇ ಕುಸಿದು ಬಿದ್ದ ಯುವಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದ್ದಿದ್ದಾನೆ. ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೇಯಲ್ಲಿ ಪ್ರಕರಣ ದಾಖಲಾಗಿದ್ದು ತಂದೆ, ಮಗಳು ಪೊಲೀಸರ ವಶದಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು