
ಸುಬ್ರಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಪೇಟೆಯ ಬೈಪಾಸ್ ರಸ್ತೆಯಲ್ಲಿ ನಾಗರಹಾವಿನ ಮರಿಯೊಂದು ನಿಧಾನಕ್ಕೆ ಬರುತ್ತಿದ್ದು ಕಂಡ ಟೂರಿಸ್ಟ್ ವಾಹನ ಚಾಲಕ ಮಾಲಕ ಸಂಘದವರು ಹಾಗೂ ಆಟೋ ರಿಕ್ಷದವರು ಗಮನಿಸಿ ಕೂಡಲೇ ಹಾವು ಹಿಡಿಯಲು ತಜ್ಞರಾದ ಆಟೋ ಚಾಲಕ ಸ್ನೇಕ್ ಮಾಧವರನ್ನು ಕರೆಸಿದರು. ಕೂಡಲೇ ಬಂದ ಸ್ನೇಕ್ ಮಾಧವರು ಹಾವಿನ ಮರಿಯನ್ನು ಪಕ್ಕಕ್ಕೆ ತಂದು, ಅದರ ಹೊರ ಭಾಗದಲ್ಲಿ ಆದ ಸಣ್ಣಪುಟ್ಟ ಗಾಯಕ್ಕೆ ಮುಲಾಂ ಹಚ್ಚಿ ಸಚಿವಳಿಸಿ ಅದನ್ನು ಸಂರಕ್ಷಿಸಿರುವರು. ಮಾದವರ ಈ ದೇವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿರುವರು.









