3 ವರ್ಷದ ಮಗನನ್ನು ಮನಬಂದಂತೆ ದೊಣ್ಣೆಯಿಂದ ಹೊಡೆದು ಕೊಂದ ತಂದೆ-ಕಹಳೆ ನ್ಯೂಸ್
ಬೆಳಗಾವಿ: ದಿನದಿಂದ ದಿನಕ್ಕೆ ಮನುಷ್ಯ ಮನುಷತ್ವ, ಮಾನವೀಯತೆಯನ್ನೂ ಕಳೆದುಕೊಂಡು ವರ್ತಿಸುತ್ತಿರುವುದು ದುರ್ದೈವ. ಇಲ್ಲೋರ್ವ ತಂದೆ ತನ್ನ ಸ್ವಂತ ಮಗನನ್ನು ದೊಣ್ಣೆಯಿಂದ ಮನಬಂದತೆ ಹೊಡೆದು ಕೊಂದಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಗಡಿ ಜಿಲ್ಲೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ಇಂತದ್ದೊಂದು ಅಮಾನವೀಯ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ತಂದೆಯೇ ತನ್ನ ಮೂರು ವರ್ಷದ ಮಗನನ್ನು ಒಲೆಯಲ್ಲಿದ್ದ ಸೌದೆಯಿಂದ ಮನಸೋ ಇಚ್ಚೆ ಥಳಿಸಿ ಸಾಯಿಸಿದ್ದಾನೆ. ಮಗುವಿನ ತಲೆ, ಕೈ-ಕಾಲು, ಬೆನ್ನು,...







