ಬ್ರಿಟಿಷರು ತೊಲಗಿದರೂ ಭಾಷಾ ದಾಸ್ಯ ತೊಲಗಿಲ್ಲ: ರಾಘವೇಶ್ವರ ಶ್ರೀ -ಕಹಳೆ ನ್ಯೂಸ್
ಗೋಕರ್ಣ: ಬ್ರಿಟಿಷರು ಭಾರತವನ್ನು ಬಿಟ್ಟು ತೊಗಲಿದರೂ, ಅವರ ಭಾಷೆ ಮಾತ್ರ ಭಾರತವನ್ನು ಬಿಟ್ಟುಹೋಗಿಲ್ಲ; ನಿತ್ಯಜೀವನದಲ್ಲಿ ಅದರ ಪ್ರಭಾವ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಅದು ಭಾರತದ ಭಾಷೆಗಳನ್ನು ನುಂಗುತ್ತಿದೆ. ಅಳಿವಿನಂಚಿನಲ್ಲಿರುವ ಭಾಷೆಗಳ ಸಾಲಿನಲ್ಲಿ ಕನ್ನಡವೂ ಸೇರಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಸ್ವಾಮೀಜಿ ನುಡಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 37ನೇ ದಿನವಾದ ಶುಕ್ರವಾರ ಜಾಲತಾಣಿಗರು, ಶ್ರೀಸೇವಾ ಶ್ರೀ ಮತ್ತು ದಿಶಾದರ್ಶಿ ವತಿಯಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು....







