Tuesday, March 10, 2026

ದೆಹಲಿ

ಅಂತಾರಾಷ್ಟ್ರೀಯದೆಹಲಿಸುದ್ದಿ

SHRUTI CHATURVEDI | ಭಾರತದ ಉದ್ಯಮಿಗೆ ಅಮೆರಿಕದಲ್ಲಿ ಕಹಿ ಅನುಭವ ; ಏರ್‌ಪೋರ್ಟ್‌ನಲ್ಲಿ 8 ಗಂಟೆ ಕೂರಿಸಿ, ಮೈ ಕೈ ಮುಟ್ಟಿ ಪುರುಷ ಅಧಿಕಾರಿಗಳಿಂದ ತಪಾಸಣೆ, ಘಟನೆ ಕುರಿತು ವ್ಯಾಪಕ ಆಕ್ರೋಶ – ಕಹಳೆ ನ್ಯೂಸ್

ವಾಷಿಂಗ್ಟನ್: ಭಾರತದ ಯುವ ಉದ್ಯಮಿ ಶೃತಿ ಚತುರ್ವೇದಿಗೆ ಅಮೆರಿಕಾದಲ್ಲಿ ಕಹಿ ಅನುಭವ ಆಗಿದೆ. ಅಲಸ್ಕಾ ಏರ್‌ಪೋರ್ಟ್ನಲ್ಲಿ ತಮ್ಮನ್ನು ಎಂಟು ಗಂಟೆ ಅನ್ಯಾಯವಾಗಿ ಎಫ್‌ಬಿಐ ನಿರ್ಬಂಧಿಸಿತ್ತು ಎಂದು ಶೃತಿ ಚತುರ್ವೇದಿ ಆರೋಪಿಸಿದ್ದಾರೆ. ಹ್ಯಾಂಡ್‌ಬಾಗ್‌ನಲ್ಲಿದ್ದ ಪವರ್‌ಬ್ಯಾಂಕ್ ಅನುಮಾನಾಸ್ಪದವಾಗಿ ಕಾಣಿಸಿದ್ದರಿಂದ ಏರ್‌ಪೋರ್ಟ್ ಸಿಬ್ಬಂದಿ ತಮ್ಮನ್ನು ತಡೆದ್ರು. ಮೈ ಕೈ ಮುಟ್ಟಿ ಪುರುಷ ಅಧಿಕಾರಿಗಳಿಂದ ತಪಾಸಣೆ ಮಾಡಿಸಿದ್ರು. ಕೊಠಡಿಯಲ್ಲಿ ಎಂಟು ಗಂಟೆ ಇರಿಸಿದ್ರು ಕನಿಷ್ಠ ವಾಶ್ ರೂಂಗೆ ಹೋಗಲು ಅವಕಾಶ ನೀಡಲಿಲ್ಲ. ಇದೆಲ್ಲದ್ರಿಂದ ನಾನು ವಿಮಾನ...
ಜಿಲ್ಲೆದೆಹಲಿರಾಷ್ಟ್ರೀಯಸುದ್ದಿ

ಸೈನಿಕರ ಅಂಗವೈಕಲ್ಯ ಪಿಂಚಣಿ ಪಡೆಯುವ ಸಮಸ್ಯೆಗಳ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಸಂಸದ ಕ್ಯಾ. ಚೌಟ- ಕಹಳೆ ನ್ಯೂಸ್

ನವದೆಹಲಿ: ಕರ್ತವ್ಯ ನಿರತರಾಗಿದ್ದ ವೇಳೆ ಅಂಗವಿಕಲತೆಗೆ ಒಳಗಾಗಿರುವ ನಮ್ಮ ಮಾಜಿ ಸೈನಿಕರು ಪಿಂಚಣಿ ಪಡೆಯುವುದಕ್ಕೆ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವುದಕ್ಕೆ ಪ್ರಸ್ತುತವಿರುವ ವ್ಯವಸ್ಥೆ ಸರಳೀಕೃತಗೊಳಿಸುವ ಮೂಲಕ ಸಿಂಗಲ್ ವಿಂಡೋ ಮಾದರಿ ವ್ಯವಸ್ಥೆ ಜಾರಿಗೊಳಿಸಬೇಕು. ಜೊತೆಗೆ ಈ ವಿಚಾರದಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ಹಾಗೂ ಬದ್ಧತೆ ಪ್ರದರ್ಶಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ.ಲೋಕಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ನಿವೃತ್ತ ಯೋಧರು ಅಂಗವೈಕಲ್ಯ ಪಿಂಚಣಿ...
ದಕ್ಷಿಣ ಕನ್ನಡದೆಹಲಿಮಂಗಳೂರುರಾಜಕೀಯಸುದ್ದಿ

ಪ್ರಧಾನಿ ಮೋದಿಯನ್ನು ಭೇಟಿಯಾದ ಕಟುಂಬ ಸಮೇತರಾಗಿ ಕ್ಯಾ. ಬ್ರಿಜೇಶ್ ಚೌಟ ; ತುಳುನಾಡಿನ ಹೆಮ್ಮೆ ಹುಲಿ ಕುಣಿತದ ‘ಪಿಲಿ ಮಂಡೆ’ ನೀಡಿ ಗೌರವ – ಕಹಳೆ ನ್ಯೂಸ್

ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರು ಕಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಪ್ರಸಾದ ಹಾಗೂ ತುಳುನಾಡಿನ ಹೆಮ್ಮೆ ಹುಲಿ ಕುಣಿತದ ‘ಪಿಲಿ ಮಂಡೆ’ ಯನ್ನು ಪ್ರಧಾನಿ ಮೋದಿಯವರಿಗೆ ನೀಡಿ ಗೌರವಿಸಿದ್ದಾರೆ....
ದೆಹಲಿರಾಜ್ಯಸುದ್ದಿ

ನಾಳೆಯಿಂದ ರಾಜ್ಯದಲ್ಲಿ ವಾಹನ ಸವಾರರಿಗೂ ತಟ್ಟಲಿದೆ ಮತ್ತಷ್ಟು ಬೆಲೆ ಏರಿಕೆ ಬಿಸಿ: ಟೋಲ್ ದರವೂ ಹೆಚ್ಚಳ-​-ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಮತ್ತಷ್ಟು ದುಬಾರಿ ದುನಿಯಾ ಆರಂಭವಾಗಲಿದೆ. ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ನಾಳೆಯಿಂದ ಮತ್ತಷ್ಟು ಬೆಲೆ ಏರಿಕೆ ಆರಂಭವಾಗಲಿದೆ. ಹಾಲಿನ ದರ ಹೆಚ್ಚಳವಾಗಿದ್ದು, ನಾಳೆಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ, ಇದರ ಜೊತೆಗೆ ವಿದ್ಯುತ್ ದರ ಹೆಚ್ಚಳವಾಗಿದೆ. ಅಷ್ಟೇ ಅಲ್ಲ ನಾಳೆಯಿಂದ ಕಸಕ್ಕೂ ತೆರಿಗೆ ಪಾವತಿ ಮಾಡಬೇಕಾದ ದುಸ್ಥಿತಿ ಬರಲಿದೆ. ಏಪ್ರಿಲ್ 1ರಿಂದ ಕಸಕ್ಕೆ ಟ್ಯಾಕ್ಸ್ ಪಾವತಿಸುವಂತೆ ಬಿಬಿಎಂಪಿ ಸೂಚನೆ ನೀಡಿದ್ದು, ಬೆಂಗಳೂರಿಗರಿಗೆ...
ದೆಹಲಿರಾಷ್ಟ್ರೀಯಸುದ್ದಿ

ನಟಿಯಾಗಲು ಅವಕಾಶ ಕೇಳಿ ಬಂದ ಯುವತಿಗೆ ಮೋಸ: ಕುಂಭಮೇಳ ಸುಂದರಿ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ​​-ಕಹಳೆ ನ್ಯೂಸ್

ನವದೆಹಲಿ: ಮಹಾಕುಂಭದ ಬೆಡಗಿ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ಆಗಿದ್ದಾರೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಡಿ ದೆಹಲಿ ಹೈಕೋರ್ಟ್ ಮೆಟ್ಟೇಲೇರಿದ್ದ ಸನೋಜ್ ಮಿಶ್ರಾಗೆ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಇದರ ಬೆನ್ನಲ್ಲೇ ಪೊಲೀಸರು ಸನೋಜ್ ಮಿಶ್ರಾ ಅರೆಸ್ಟ್ ಮಾಡಿದ್ದಾರೆ. ಈ ಹಿಂದೆ ಯುವತಿಯೊಬ್ಬಳಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಮಹಾ ನಗರಿಗೆ ಕರೆಯಿಸಿಕೊಂಡಿದ್ದ ನಿರ್ದೇಶಕ ಸನೋಜ್...
ದೆಹಲಿರಾಷ್ಟ್ರೀಯಸುದ್ದಿ

ಛತ್ತೀಸ್’ಗಢದ ಎನ್’ಕೌಂಟರ್’ನಲ್ಲಿ ಮಹಿಳಾ ನಕ್ಸಲ್ ಹತ್ಯೆ, ಶಸ್ತ್ರಾಸ್ತ್ರಗಳು ವಶಕ್ಕೆ-ಕಹಳೆನ್ಯೂಸ್

ನವದೆಹಲಿ: ಛತ್ತೀಸ್ಗಢದ ಬಸ್ತಾರ್ ಪ್ರದೇಶದಲ್ಲಿ ಸೋಮವಾರ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಮಹಿಳಾ ನಕ್ಸಲೀಯರೊಬ್ಬರು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ನಕ್ಸಲ್ ತಲೆಗೆ 25 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು ಮತ್ತು ಅವರನ್ನು ರೇಣುಕಾ ಅಲಿಯಾಸ್ ಬಾನು ಎಂದು ಗುರುತಿಸಲಾಗಿದೆ.ಇನ್ಸಾಸ್ ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಎಸ್ಪಿಒನಿಂದ ವಶಪಡಿಸಿಕೊಳ್ಳಲಾಗಿದೆ. ಬಸ್ತಾರ್ ಪ್ರದೇಶದಲ್ಲಿರುವ ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ...
ದೆಹಲಿರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

ಎ.14ರ ಅಂಬೇಡ್ಕರ್‌ ಜಯಂತಿಗೆ ಸಾರ್ವಜನಿಕ ರಜೆ: ಕೇಂದ್ರ ಸರಕಾರ‌ ಘೋಷಣೆ-ಕಹಳೆ ನ್ಯೂಸ್

ಹೊಸದಿಲ್ಲಿ: ಡಾ|ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮದಿನವಾದ ಎ.14ನ್ನು ಸಾರ್ವಜನಿಕ ರಜಾದಿನವೆಂದು ಕೇಂದ್ರ ಸರಕಾರ‌ ಶುಕ್ರವಾರ ಘೋಷಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌, “ಸಂವಿಧಾನ ಶಿಲ್ಪಿ, ಸಮಾಜದಲ್ಲಿ ಸಮಾನತೆ ಯುಗವನ್ನು ಸ್ಥಾಪಿಸಿದ ಬಾಬಾ ಸಾಹೇಬ್‌ ಡಾ| ಅಂಬೇಡ್ಕರ್‌ ಅವರ ಜನ್ಮದಿನವು ಇನ್ನು ಮುಂದೆ ಸಾರ್ವಜನಿಕ ರಜಾದಿನವಾಗಲಿದೆ ಎಂದಿದ್ದಾರೆ. ಅಲ್ಲದೆ ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಾಬಾ ಸಾಹೇಬರ ಅನುಯಾಯಿಯಾದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರ...
ಜಿಲ್ಲೆದೆಹಲಿರಾಜ್ಯರಾಷ್ಟ್ರೀಯಸುದ್ದಿ

ಸಂಸದ ಕ್ಯಾ. ಚೌಟ ಅವರಿಂದ ಶಾಸಕ ಪೂಂಜ ಜತೆಗೂಡಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಭೇಟಿ ‘ಪ್ರಸಾದ್’ ಯೋಜನೆಯಡಿಯಲ್ಲಿ ದ.ಕ. ದ ಹಲವು ಪ್ರಮುಖ ದೇವಾಲಯಗಳ ಅಭಿವೃದ್ದಿಗೆ ಮನವಿ -ಕಹಳೆ ನ್ಯೂಸ್

ನವದೆಹಲಿ: ಪುತ್ತೂರು ಶ್ರೀ ಮಹಾಲಿಂಗೇಶ್ವರ, ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಮುಖ ದೇವಾಲಯಗಳನ್ನು ಕೇಂದ್ರ ಸರ್ಕಾರ ‘ಪ್ರಸಾದ್’ ಯೋಜನೆಯಡಿಯಲ್ಲಿ ಅಭಿವೃದ್ದಿಪಡಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಜೊತೆ ನವದೆಹಲಿಯಲ್ಲಿ ಇಂದು ಸಚಿವರನ್ನು ಭೇಟಿಯಾಗಿ...
1 34 35 36 37 38 49
Page 36 of 49