ಸರ್ವರಿಗೂ ಮುಕ್ತಚಿಂತನೆಗೆ ಅವಕಾಶ ನೀಡುವ ಏಕೈಕ ಧರ್ಮ ಸನಾತನ ಹಿಂದೂ ಧರ್ಮ – ಹರಿಹರಪುರದ ಶ್ರೀಗಳು-ಕಹಳೆ ನ್ಯೂಸ್
ಬೆಂಗಳೂರು: ಹರಿಹರಪುರದ ಶ್ರೀಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾ ಮಠಕ್ಕೆ ಚಿತ್ತೈಸಿ ಆಶೀರ್ವಚನವನ್ನ ಅನುಗ್ರಹಿಸಿದರು. ಕಳೆದ ವರ್ಷ ಅಯ್ಯೋಧ್ಯೆಯ ರಾಮಮಂದಿರದಲ್ಲಿ ಉಭಯ ಮಠಗಳ ಶ್ರೀಗಳ ಸಮಾಗಮವಾಗಿತ್ತು. ಈ ವರ್ಷ ಬೆಂಗಳೂರಿನ ಶ್ರೀರಾಮಚಂದ್ರಾಪುರ ಮಠದಲ್ಲಿ ಉಭಯ ಶ್ರೀಗಳ ಸಾನ್ನಿಧ್ಯ, ಅಮೃತವಚನದ ಭಾಗ್ಯ ಭಕ್ತರಿಗೊದಗಿಬಂದಿತ್ತು. ವೈವಿಧ್ಯತೆ ಅಡಕವಾಗಿರುವ ಸಂಸ್ಕೃತಿಯ ಪ್ರಾಣವಿರುವುದೇ ಏಕತೆಯಲ್ಲಿ. ಒಗ್ಗಟ್ಟಾಗಿರುವ ಮೂಲಕ ಸಂಸ್ಕೃತಿಯ ಉಳಿವಿಗಾಗಿ,...







