ಜಿಡಿಪಿಯನ್ನು ಹೆಚ್ಚಿಸಲು ಹೊಸ ಶಿಕ್ಷಣ ನೀತಿ ಸಹಕಾರಿಯಾಗಲಿದೆ- ಶ್ರೀಮತಿ ರೂಪಲೇಖ –ಕಹಳೆ ನ್ಯೂಸ್
ಪುತ್ತೂರು: ಹೊಸ ಶಿಕ್ಷಣ ನೀತಿಯು ಕೌಶಲ್ಯ ವೃತ್ತಿಗೆ ಒತ್ತು ನೀಡುವುದರಿಂದ ಉದ್ಯೋಗವಕಾಶವನ್ನು ವಿಫುಲವಾಗಿ ನೀಡಬಹುದು .ಈ ರೀತಿಯ ಬೆಳವಣಿಗೆಗಳು ಆದಾಗ ಜಿಡಿಪಿಯಲ್ಲಿಯೂ ಬದಲಾವಣೆಯಾಗಲು ಸಾಧ್ಯ ಎಂದು ಪುತ್ತೂರಿನ ನರೇಂದ್ರ ಪದವಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೂಪಕಲಾರವರು ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದ ಸಂಸ್ಕ್ರತಿ-ಪ್ರಸ್ತುತಿ ಎರಡನೇಯ ಸರಣಿ ಕಾರ್ಯಕ್ರಮದಲ್ಲಿ ಸಮನ್ವಯಕಾರರಾಗಿ ಭಾಗವಹಿಸಿ ಶಿಕ್ಷಣದಿಂದ ಜಿಡಿಪಿಯನ್ನು ಹೆಚ್ಚಿಸಲು ಸಾಧ್ಯವೇ ಎನ್ನುವುದರ ಬಗೆಗೆ ಮಾಹಿತಿಯನ್ನು ನೀಡಿದ್ದರಲ್ಲದೆ, ಕಾರ್ಯಕ್ರಮದಲ್ಲಿ...







