Monday, March 9, 2026

ಪುತ್ತೂರು

ಪುತ್ತೂರು

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕರುಣಾಕರ ಸುವರ್ಣ ಆಯ್ಕೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ದ.ಕ ಜಿಲ್ಲೆಯ ಎ’ ಶ್ರೇಣಿಯ ದೇವಾಲಯಗಳಲ್ಲಿ ಒಂದಾಗಿರುವ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಕರುಣಾಕರ ಸುವರ್ಣ ಆಯ್ಕೆಯಾಗಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಟಂದೂರು., ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ತಾಪಂ ಸದಸ್ಯ ಮುಕುಂದ ಗೌಡ ರವರ ಉಪಸ್ಥಿತಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕರುಣಾಕರ ಸುವರ್ಣರವರ ಹೆಸರನ್ನು ಸದಸ್ಯರಾದ ಜಯಂತ ಪೊರೋಳಿ ಸೂಚಿಸಿ, ಹರಿರಾಮಚಂದ್ರ ಅನುಮೋದಿಸುವ ಮೂಲಕ ಸರ್ವಾನುಮತದಿಂದ ಆಯ್ಕೆ ನಡೆಸಲಾಯಿತು....
ಪುತ್ತೂರುಸುದ್ದಿ

ಗಯಾಪದ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲೀಂಗೇಶ್ವರ ಮಹಾಕಾಳಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಸದಸ್ಯರ ಪಟ್ಟಿ ಪ್ರಕಟ – ಕಹಳೆ ನ್ಯೂಸ್

ಉಪ್ಪಿನಂಗಡಿ : ಗಯಾಪದ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲೀಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪಕನ ಸಮಿತಿ ಸದಸ್ಯರ ಪಟ್ಟಿ ಪ್ರಕಟಗೊಂಡಿದೆ. ಪ್ರಧಾನ ಅರ್ಚಕರಾದ ಹರೀಶ್ ಉಪಾಧ್ಯಯ, ಮಹಿಳಾ ಸದಸ್ಯೆಯಾಗಿ ಹರಿಣಿ ರವೀಂದ್ರ ಧರ್ಬೆ ಪ್ರೇಮಲತಾ.ಕೆ, ರಾಮ ನಾಯ್ಕ, ಕರುಣಾಕರ ಸುವರ್ಣ ಇಳಂತಿಲ, ಹರಿ ರಾಮಚಂದ್ರ ರಾಮನಗರ, ಸುನೀಲ್ ಅನವು, ಮಹೇಶ್ ಗಾಣದಮೂಲೆ, ಜಯಂತ ಪರೋಳಿ ಆಯ್ಕೆಯಾಗಿದ್ದಾರೆ....
ಪುತ್ತೂರು

ಅಂಬಿಕಾದಲ್ಲಿ ನೀಟ್ ರಿಪೀಟರ್ಸ್ ತರಗತಿಗಳ ಉದ್ಘಾಟನೆ -ಕಹಳೆ ನ್ಯೂಸ್

ಪುತ್ತೂರಿನಲ್ಲಿ ಯಾವುದೇ ನೀಟ್ ರಿಪೀಟರ್ಸ್ ಕೋಚಿಂಗ್ ತರಗತಿಗಳು ಇಲ್ಲದಿರುವುದನ್ನು ಮನಗಂಡು, ಪುತ್ತೂರಿನಲ್ಲಿ ನೀಟ್ ರಿಪೀಟರ್ಸ್ ಕೋಚಿಂಗ್ ತರಗತಿಗಳನ್ನು ನಡೆಸಲು ಅಂಬಿಕಾ ವಿದ್ಯಾಲಯವು ತೀರ್ಮಾನಿಸಿತ್ತು. ಅದರಂತೆಯೇ ದಿನಾಂಕ 05-11-2020, ಗುರುವಾರದಂದು ಪುತ್ತೂರಿನ ಖ್ಯಾತ ವೈದ್ಯರಾದಂತಹ ಜೆ.ಸಿ.ಅಡಿಗ ಅವರು ನೀಟ್ ರಿಪೀಟರ್ಸ್ ತರಗತಿಗಳನ್ನು ಉದ್ಘಾಟಿಸಿದರು. ಯಾವುದೇ ಒಬ್ಬ ವಿದ್ಯಾರ್ಥಿಯು ಪ್ರಥಮ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಹೋದರೆ ಧೃತಿಗೆಡಬೇಕೆಂದಿಲ್ಲ. ಛಲ, ಆತ್ಮವಿಶ್ವಾಸ ಹಾಗೂ ಸರಿಯಾದ ಕೋಚಿಂಗ್ ವ್ಯವಸ್ಥೆಗಳಿಂದಾಗಿ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಬಹುದು ಎಂದು...
ಪುತ್ತೂರು

BREAKING NEWS:-ಚಿಕ್ಕಮಗಳೂರು ಪೊಲೀಸರ ಭರ್ಜರಿ ಬೇಟೆ, ಭಾರಿ ಪ್ರಮಾಣದ ಖೋಟಾ ನೋಟು , ಕಾರು ವಶ. ವಿಟ್ಲ , ಪುತ್ತೂರು ಮೂಲದ ನಾಲ್ವರು ಖದೀಮರ ಬಂಧನ- ಕಹಳೆ ನ್ಯೂಸ್

ಚಿಕ್ಕಮಗಳೂರು ಪೊಲೀಸರ ಭರ್ಜರಿ ಬೇಟೆ, ಭಾರಿ ಪ್ರಮಾಣದ ಖೋಟಾ ನೋಟು , ಕಾರು ವಶ. ವಿಟ್ಲ , ಪುತ್ತೂರು ಮೂಲದ ನಾಲ್ವರು ಖದೀಮರ ಬಂಧನ. ಕಿಂಗ್ ಪಿನ್ ಕರಾಯಿ ಜುಬೈರ್ ಗಾಗಿ ತೀವ್ರ ಶೋಧ. ಕಳಚಿಬಿದ್ದ ಸ್ವಯಂಘೋಷಿತ ಸಮಾಜಸೇವಕನ ಮುಖವಾಡ. ವಿಟ್ಲ: ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಠಾಣಾ ವ್ಯಾಪ್ತಿಯ ಹಾಂದಿ ಸರ್ಕಲ್ ಬಳಿ ಅನುಮಾನಾಸ್ಪದವಾಗಿ ಬರುತ್ತಿದ್ದ ಪುತ್ತೂರು ನೋಂದಣಿಯ ಮಾರುತಿ ಕಾರನ್ನು ತಡೆದ ಪೊಲೀಸರ ತಂಡ ತನಿಖೆ ನಡೆಸಿದಾಗ ಬರೋಬ್ಬರಿ...
ಪುತ್ತೂರು

ವಿವೇಕಾನಂದ ಪದವಿ ಕಾಲೇಜು ಹಾಗೂ ಶ್ರೀರಾಮ ಕಾಲೇಜು ಕಲ್ಲಡ್ಕ ಇದರ ಸಹಯೋಗದೊಂದಿಗೆ ವಿವೇಕಾನಂದ ಕಾಲೇಜಿನ ಭವಿಷ್ ಘಟಕದ ವಿದ್ಯಾರ್ಥಿಗಳಿಗೆ ಭೋದನಾ ಕೌಶಲ್ಯ ಕುರಿತಾದ ವರ್ಚುವಲ್ ಉಪನ್ಯಾಸ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ಸ್ವಾಮಿ ವಿವೇಕಾನಂದರನ್ನು ರೂಪಿಸಿದ ರಾಮಕೃಷ್ಣ ಪರಮಹಂಸ, ಅಬ್ದುಲ್ ಕಲಾಂ ರನ್ನು ರೂಪಿಸಿದ ರಾಮಸ್ವಾಮಿ ಹಾಗೂ ಹಕ್ಕಬುಕ್ಕರನ್ನು ತಯಾರು ಮಾಡಿದ ವಿದ್ಯಾರಣ್ಯರಂತಹ ಶ್ರೇಷ್ಠ ಗುರುಗಳ ಅವಶ್ಯಕತೆ ಪ್ರಸ್ತುತ ಸಮಾಜಕ್ಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣಪತಿ ಹೆಗಡೆ ಹೇಳಿದರು. ಪುತ್ತೂರಿನ ವಿವೇಕಾನಂದ ಪದವಿ ಕಾಲೇಜು ಹಾಗೂ ಶ್ರೀರಾಮ ಕಾಲೇಜು ಕಲ್ಲಡ್ಕ ಇದರ ಸಹಯೋಗದೊಂದಿಗೆ ವಿವೇಕಾನಂದ ಕಾಲೇಜಿನ ಭವಿಷ್ ಘಟಕದ ವಿದ್ಯಾರ್ಥಿಗಳಿಗೆ ನಡೆದ ಭೋದನಾ...
ಪುತ್ತೂರುರಾಜಕೀಯಸುದ್ದಿ

Breaking News : ಕೇಸರಿ ಭದ್ರಕೋಟೆಯಲ್ಲಿ ಅರಳಿದ ಕಮಲ ; ಪುತ್ತೂರು ನಗರ ಸಭೆ ಅಧ್ಯಕ್ಷರಾಗಿ ಜೀವಂದರ್ ಜೈನ್ , ಉಪಾಧ್ಯಕ್ಷರಾಗಿ ವಿದ್ಯಾ ಆರ್. ಗೌರಿ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು : ನ 2 : ನಗರಸಭೆಗೆ ಚುನಾವಣೆ ನಡೆದು ಎರಡು ವರ್ಷಗಳ ಸುದೀರ್ಘ ಅವಧಿಯ ಬಳಿಕ ಇಂದು ( ನ .2 ) ಪುತ್ತೂರು ನಗರ ಸಭೆಯ ಅಧ್ಯಕ್ಷ –ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 31 ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿರುವ ಬಿಜೆಪಿ ಈ ಎರಡು ಸ್ಥಾನಗಳಿಗೂ ತನ್ನ ಅಭ್ಯರ್ಥಿಗಳನ್ನೂ ಕಣಕ್ಕಿಳಿಸಿತ್ತು. ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನಾಲ್ಕು ಬಾರಿ ಗೆದ್ದಿರುವ ಹಿರಿಯ ಸದಸ್ಯ...
ಪುತ್ತೂರು

ದ.ಕನ್ನಡದ ಭೌಗೋಳಿಕ ಸ್ವರೂಪ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ-ಈಶ್ವರ ಪ್ರಸಾದ್ ಕೆ.ಎಸ್ -ಕಹಳೆ ನ್ಯೂಸ್

ಇಂದು ದ.ಕನ್ನಡ ಜಿಲ್ಲೆಯು ಆರ್ಥಿಕವಾಗಿ ಬಹಳಷ್ಟು ಮುಂದುವರಿದಿದ್ದು ಇಲ್ಲಿಯ ಭೌಗೋಳಿಕ ಲಕ್ಷಣವೂ ಇದಕ್ಕೆ ಪೂರಕವಾಗಿದೆ. ಅಲ್ಲದೇ ಇಲ್ಲಿಯ ನಿರಂತರವಾದ ಕೃಷಿ ಚಟುವಟಿಕೆಯಿಂದಾಗಿ ನಮ್ಮ ಜಿಲ್ಲೆಯು ಇಂದು ದೇಶದ ಆರ್ಥಿಕ ಚಟುವಟಿಕೆಯಲ್ಲಿ ಸಿಂಹಪಾಲನ್ನು ಪಡೆದಿದೆ ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಈಶ್ವರ ಪ್ರಸಾದ್ ಕೆ,ಎಸ್ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಸುವರ್ಣಮಹೋತ್ಸವ ಸಭಾಭವನದಲ್ಲಿ ನಡೆದ ಸಂಸ್ಕøತಿ- ಪ್ರಸ್ತುತಿ ಸರಣಿ ಕಾರ್ಯಕ್ರಮದಲ್ಲಿ ಸಮನ್ವಯಕಾರರಾಗಿ ಭಾಗವಹಿಸಿ ಭಾರತ...
ಪುತ್ತೂರು

ನವೆಂಬರ್ 2ರಂದು ಮತ್ತೆ ಪ್ರಾರಂಭವಾಗಲಿದೆ ಅಂತರ್ಜಾಲೀಯ ಶ್ರೀಮದ್ಭಗವದ್ಗೀತಾ ಸರಣಿ ಉಪನ್ಯಾಸ – ಕಹಳೆ ನ್ಯೂಸ್

ಪುತ್ತೂರು : ಅಂಬಿಕಾ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು, ಇವರಿಂದ ತತ್ವಶಾಸ್ತ್ರ ಹಾಗೂ ಸಂಸ್ಕøತ ವಿಭಾಗಗಳು ಪ್ರಸ್ತುತ ಪಡಿಸುವ ಅಂತರ್ಜಾಲೀಯ ಶ್ರೀಮದ್ಭಗವದ್ಗೀತಾ ಸರಣಿ ಉಪನ್ಯಾಸ ಕಾರ್ಯಕ್ರಮ, ನವೆಂಬರ್ 2ರಂದು ಸಂಜೆ 6 ರಿಂದ 7ರ ತನಕ ನಡೆಯಲಿದೆ. ಶ್ರೀಮದ್ಭಗವದ್ಗೀತೆಯ 16ನೇ ಅಧ್ಯಾಯ, ದೈವಾಸುರ ಸಂಪ ದ್ವಿಭಾಗ ಯೋಗವನ್ನು ಅಂಬಿಕಾ ಮಹಾವಿದ್ಯಾಲಯ ಪ್ರಾಂಶುಪಾಲರು ಡಾ.ವಿ.ವಿನಾಯಕ ಭಟ್ಟ ಗಾಳಿಮನೆ ಉಪನ್ಯಾಸ ನೀಡಲಿದ್ದಾರೆ. Google meet app . Meeting invitation: Bhagavadgita @Mon, 2...
1 334 335 336 337 338 350
Page 336 of 350