ಸಾಹಿತಿ ಡಾ.ಶ್ರೀಧರ ಎಚ್.ಜಿ ಅವರ ರಚನೆಯ ‘ ಶಿಖಂಡಿ’ ಬಿಡುಗಡೆಯ ಕಥನ ಕೃತಿ ಬಿಡುಗಡೆ-ಕಹಳೆ ನ್ಯೂಸ್
ಪುತ್ತೂರು: ಸಮಕಾಲೀನ ಸಂಗತಿಗಳಿಗೆ ಮುಖಾಮುಖಿಯಾಗುತ್ತಲೇ ಪುರಾಣದ ಒಳಸುಳಿಗಳನ್ನು ಬಿಚ್ಚುತ್ತಾ ಹೋಗುವ ನಾಟಕ ಶಿಖಂಡಿ. ಈ ಕೃತಿಯನ್ನು ಓದುತ್ತಾ ಸಾಗಿದಂತೆ ಅದು ಓದುಗರನ್ನು ಆವರಿಸಿ ಸಾರ್ವತ್ರಿಕ ಚಿಂತನೆಗಳಿಗೆ ಪ್ರೇರೇಪಿಸುತ್ತಾ ಸಾಗುತ್ತದೆ ಎಂದು ಆಂಧ್ರಪ್ರದೇಶದ ಕುಪ್ಪಂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ದುರ್ಗಾಪ್ರವೀಣ ಎಂ.ಎಸ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ.ಶ್ರೀಧರ ಎಚ್.ಜಿ ಅವರು ರಚಿಸಿರುವ ಶಿಖಂಡಿ - ಬಿಡುಗಡೆಯ ಕಥನ ಎಂಬ ಕೃತಿಯನ್ನು ಆನ್ ಲೈನ್ ಮೂಲಕ...







