ನಮ್ಮೂರ ಮೇಸ್ಟ್ರು ವಿದ್ಯಾರ್ಥಿಗಳ ಬದುಕಿಗೆ ಹೊಸ ಭಾಷ್ಯ ಬರೆದ ಸಾಧಕ ಗುರುಗಳ ಜೀವನಗಾಥೆ -ಕಹಳೆ ನ್ಯೂಸ್
ಬಂಟ್ವಾಳ : ಹೆಸರು ಕೆ. ಸುಬ್ರಾಯ ಭಟ್.90 ರ ಇಳಿ ವಯಸ್ಸಿನಲ್ಲಿಯೂ ಬತ್ತದ ಉತ್ಸಾಹ. ಕರಿ ಹಲಗೆಯ ಮೇಲೆ ಮೂಡಿ ಬರುತ್ತಿರುವ ಸುಂದರವಾದ ಅಕ್ಷರಗಳು.ಬಹಳ ಆಸಕ್ತಿಯಿಂದ ಪಾಠವನ್ನು ಕೇಳುತ್ತಿರುವ ಪುಟ್ಟ ಮಕ್ಕಳು.ಅಂದ ಬರಹಕ್ಕೆ,ಕ್ಲಿಷ್ಟವಾದ ಪದ ಬಳಕೆಗೆ ಮತ್ತು ಸ್ಪಷ್ಟವಾದ ಉಚ್ಚಾರ, ಸರಿಯಾದ ಮಗ್ಗಿ ಮತ್ತು ಸಂಖ್ಯೆ ಹೇಳಿದ ವಿದ್ಯಾರ್ಥಿಗೆ ಕೂಡಲೇ ಪೆನ್ನು,ಪುಸ್ತಕ ಅಥವಾ ನಗದು ಬಹುಮಾನ. ಅಂದ ಹಾಗೆ ಈ ದೃಶ್ಯವನ್ನು ನೀವು ನೋಡುತ್ತಿರುವುದು ಬಂಟ್ವಾಳ ತಾಲೂಕಿನ ಕೆದಿಲ ಅನುದಾನಿತ...







