Friday, July 24, 2026

ಬಂಟ್ವಾಳ

ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ವೀರಕಂಭ ಮಾತೃಶ್ರೀ ಗೆಳೆಯರ ಬಳಗದ ರಜತಾ ಸಂಭ್ರಮದ ಸವಿನೆನಪಿಗಾಗಿ “ಮಾತೃಶ್ರೀ ಆಶ್ರಯ’ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ ; ಸಂಘ-ಸಂಸ್ಥೆ ಸಂಘಟನೆ ಗಳನ್ನು ಕಟ್ಟುವುದು ಸುಲಭ ಉಳಿಸುವುದು ಕಷ್ಟ.. ರಾಜೇಶ್ ನಾಯಕ್ – ಕಹಳೆ ನ್ಯೂಸ್

ಕಲ್ಲಡ್ಕ : ಸಂಘ-ಸಂಸ್ಥೆ ಸಂಘಟನೆಗಳನ್ನು ಕಟ್ಟುವುದು ಸುಲಭ ಆದರೆ ಸಂಘ ಸಂಸ್ಥೆಗಳು ಸಂಘಟನೆಗಳು ದೀರ್ಘವಾಗಿ ಜೀವಂತಿಕೆಯಿಂದ ಕೂಡಿ ಕಾರ್ಯರೂಪಗೊಳ್ಳಬೇಕಾದರೆ ಅವರೊಳಗಿನ ಮನಸ್ಥಿತಿಗಳು ಏಕರೂಪವಾಗಿರಬೇಕು, ಸಮಾಜಕ್ಕೆ ಸಹಾಯ ಮಾಡುವ ಮನೋಭಾವ ಎಲ್ಲರಲ್ಲೂ ಮೂಡಿ ಬರಬೇಕು. ವಿವಿಧ ವಯೋಮಾನದ ವಿವಿಧ ಮನಸ್ಥಿತಿಗಳನ್ನು ಹೊಂದಿರುವ ಸದಸ್ಯರನ್ನೆಲ್ಲಾ ಒಂದೇ ಚೌಕಟ್ಟಿನಲ್ಲಿ ಹೊಂದಿಸಲು ಮತ್ತು ಸಮಾಜ ಸೇವೆಯ ಮನೋಭಾವನೆ ಬೆಳೆಸುವುದು ತುಂಬಾ ಕಷ್ಟದ ಕೆಲಸ, ಇಂತಹ ಪರಿಸ್ಥಿತಿಯಲ್ಲೂ ಕಳೆದ 25 ವರ್ಷಗಳಿಂದ ಊರಿನಲ್ಲಿ ಉತ್ತಮ ಸಂಘಟನೆ ಎನಿಸಿಕೊಂಡು...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ, ವತಿಯಿಂದ ಸಾರ್ವಜನಿಕ ಬಸ್ಸು ತಂಗುಧಾಣ ಲೋಕಾರ್ಪಣೆ – ಕಹಳೆ ನ್ಯೂಸ್

ಕಲ್ಲಡ್ಕ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಎಂಬಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ, ವತಿಯಿಂದ ಸಾರ್ವಜನಿಕ ಬಸ್ಸು ತಂಗುಧಾಣ ಆದಿತ್ಯವಾರ ಲೋಕಾರ್ಪಣೆ ಮಾಡಲಾಯಿತು. ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ ಅಧ್ಯಕ್ಷರಾದ ಜಗನಾಥ್ ಸಾಲಿಯಾನ್ ಲೋಕಾರ್ಪಣೆ ಮಾಡಿ ಮಾತನಾಡಿ ವೀರಕಂಭ ಗ್ರಾಮದ ಮಜಿ ಪ್ರದೇಶದ ಜನರ ಬೇಡಿಕೆಗೆ ಸ್ಪಂದಿಸಿ ಪ್ರಯಾಣಿಕರ ತಂಗುದಾಣ ವನ್ನು ನಿರ್ಮಿಸಿದ್ದು ಇದರ ಉಸ್ತುವಾರಿಯನ್ನು ಈ ಪ್ರದೇಶದ ಜನರೇ ನೋಡಿಕೊಂಡು ಸ್ವಚ್ಛತೆಯನ್ನು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಾಳೆ (ಅ19 )ವೀರಕಂಭ ಮಾತೃಶ್ರೀ ಗೆಳೆಯರ ಬಳಗದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ “ಮಾತೃಶ್ರೀ ಆಶ್ರಯ’ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ-ಕಹಳೆ ನ್ಯೂಸ್

ಕಲ್ಲಡ್ಕ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಸಂಘಟನೆ ಪ್ರಾರಂಭವಾಗಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ ವೀರಕಂಭ ಗ್ರಾಮದ ಅನಂತಾಡಿ ಕ್ರಾಸ್ ರಸ್ತೆಯ ಬಲಿ ನೂತನವಾಗಿ "ಮಾತೃಶ್ರೀ ಆಶ್ರಯ' ಎಂಬ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದ್ದು ಅದರ ಲೋಕಾರ್ಪಣ ಕಾರ್ಯಕ್ರಮವನ್ನು ಬಂಟ್ವಾಳ ಕ್ಷೇತ್ರ ಶಾಸಕ ಶ್ರೀ ರಾಜೇಶ್ ನಾಯಕ್ ಅಕ್ಟೋಬರ್ 19 ರಂದು ಬೆಳಿಗ್ಗೆ 11 ಗಂಟೆಗೆ ಮಾಡಲಿರುವರು. ಈ ಸಂದರ್ಭದಲ್ಲಿ ವೀರಕಂಬ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ:ಹಿಂದು ಮುಖಂಡ ಭರತ್ ಕುಮ್ಡೇಲು ಅವರಿಗೆ ಪಿತೃ ವಿಯೋಗ – ಕಹಳೆ ನ್ಯೂಸ್

ಬಂಟ್ವಾಳ: ಹಿಂದು ಮುಖಂಡ ಭರತ್ ಕುಮ್ಡೇಲು ಇವರ ತಂದೆ ಶ್ರೀಯುತ ಸೇಸಪ್ಪ ಬೆಳ್ಚಾಡ ಕುಮ್ಡೇಲು ಇಂದು ಮಧ್ಯಾಹ್ನ 12;15ಕ್ಕೆ ಸ್ವರ್ಗಸ್ಥರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ 5ಗಂಟೆಗೆ ಸರಿಯಾಗಿ ನಡೆಸಲಾಗುವುದು ಎಂದು ಮೃತರ ಸಂಬಂಧಿಕರು ತಿಳಿಸಿರುತ್ತಾರೆ....
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವವಾಹಿನಿ ಬಂಟ್ವಾಳ ಘಟಕದ ಗುರುತತ್ವವಾಹಿನಿ 56ನೇ ಮಾಲಿಕೆ ; ನಾರಾಯಣಗುರುಗಳು ಷೋಷಿತ ಸಮಾಜದ ದಾರಿದೀಪ : ಬಿ‌ ರಮಾನಾಥ ರೈ – ಕಹಳೆ ನ್ಯೂಸ್

ಬಂಟ್ವಾಳ : ಸಮಾಜದಲ್ಲಿ ಅಸ್ಪೃಶ್ಯತೆ, ಜಾತ್ಯತೀತತೆ ಮತ್ತು ಅಸಮಾನತೆ ವ್ಯಾಪಕವಾಗಿದ್ದ ಕಾಲದಲ್ಲಿ, ನಾರಾಯಣ ಗುರುಗಳು ಪ್ರಜ್ಞೆಯ ಬೆಳಕಾಗಿ ಉದಯಿಸಿದರು. “ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಅವರ ಘೋಷಣೆ, ಸಾಮಾಜಿಕ ಬದಲಾವಣೆಯ ಕ್ರಾಂತಿಯಾಗಿ ಪರಿಣಮಿಸಿತು ಮತ್ತು ಆತ್ಮವಿಶ್ವಾಸದಿಂದ ಬದುಕುವಂತೆ ಪ್ರೇರೇಪಿಸಿತು. ನಾರಾಯಣಗುರುಗಳ ತತ್ವಗಳು ಇಂದಿಗೂ ಸಾಮಾಜಿಕ ನ್ಯಾಯ, ಸಹಿಷ್ಣುತೆ ಮತ್ತು ಸಮಾನತೆಗಾಗಿ ದಾರಿದೀಪವಾಗಿ ಬೆಳಗುತ್ತಿವೆ. ಅವರ ಸಂದೇಶಗಳು ನಮ್ಮನ್ನು ಮಾನವೀಯತೆ ಮತ್ತು ಸಹಭಾಗಿತ್ವದ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತವೆ....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ತಾಲೂಕು ಸಹಕಾರ ಭಾರತೀಯ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ-ಕಹಳೆ ನ್ಯೂಸ್

ಕಲ್ಲಡ್ಕ : ಬಂಟ್ವಾಳ ತಾಲೂಕು ಸಹಕಾರ ಭಾರತೀಯ ಸಭೆ ನೇರಳಕಟ್ಟೆ ಸೊಸೈಟಿಯ ಸಭಾಂಗಣದಲ್ಲಿ ದಿನಾಂಕ 15.10.25 ನೇ ಬುಧವಾರ ಜರಗಿತು. ಸಭೆಯಲ್ಲಿ ರಾಜ್ಯ ಸಹಕಾರ ಭಾರತೀಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್, ದ.ಕ ಜಿಲ್ಲಾ ಅಧ್ಯಕ್ಷ ಬಿ ಸುಧಾಕರ ರೈ ಬೋಳಂತೂರು, ದ.ಕ ಜಿಲ್ಲಾ ಮಹಿಳಾ ಪ್ರಮುಖರಾದ ಶ್ರೀಮತಿ ಸುಭದ್ರ ರಾವ್ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬಂಟ್ವಾಳ ಸಹಕಾರ ಭಾರತೀಯ ನೂತನ ಅಧ್ಯಕ್ಷರಾಗಿ ನೇರಳಕಟ್ಟೆ ಸೊಸೈಟಿಯ ಅಧ್ಯಕ್ಷರಾದ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಶ್ರೀರಾಮ ಡಿಗ್ರಿ ಕಾಲೇಜಿನಲ್ಲಿ ಅಂತರ್ ಕಾಲೇಜು ಪಿಯು ಫೆಸ್ಟ್- ಲೋಗೋ ಬಿಡುಗಡೆ – ಕಹಳೆನ್ಯೂಸ್

ಕಲ್ಲಡ್ಕ : ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇಲ್ಲಿ ಅಕ್ಟೋಬರ್ 25, ರಂದು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಅಂತರ್ ಕಾಲೇಜು ಮಟ್ಟದಲ್ಲಿ ನಡೆಯಲಿರುವ ಫೆಸ್ಟ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮವು ಅ . 14 ರಂದು ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಆಮಂತ್ರಣ ಪತ್ರಿಕೆ ಹಾಗೂ ಲೋಗೋ ಬಿಡುಗಡೆಗೊಳಿಸಿದರು. ಭಾರತ್ ಸರ್ವಿಸಸ್ ಮಾಲಕ ಕಿಶನ್ ಮದೆಪ್ಪಾಡಿ, ಸ್ಟಾರ್ ಇನ್ಫೋಟೆಕ್ ಮಾಲಕ...
ದಕ್ಷಿಣ ಕನ್ನಡಬಂಟ್ವಾಳಮೂಡಬಿದಿರೆಸುದ್ದಿ

ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈ ಕೋರ್ಟ್ ಗ್ರೀನ್ ಸಿಗ್ನಲ್‌ : ಪಿಲಿಕುಳ ಕಂಬಳ ಕುರಿತ ವಿಚಾರಣೆ ಮುಂದೂಡಿಕೆ-ಕಹಳೆ ನ್ಯೂಸ್

ಮೂಡುಬಿದಿರೆ: ಕಂಬಳ ಆಯೋಜನೆಗೆ ಪೇಟಾದವರು ತಕರಾರು ಮಾಡಿದ ಹಿನ್ನೆಲೆಯಲ್ಲಿ ನಿಂತು ಹೋಗಿದ್ದ ಮೈಸೂರು, ಬೆಂಗಳೂರು ಹಾಗೂ ಶಿವಮೊಗ್ಗ ಕಂಬಳ ನಡೆಸಲು ಹೈ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಸರಕಾರ ಅಧೀನದ ರಾಜ್ಯ ಕಂಬಳ ಅಸೋಸಿಯೇಷನ್ ಗೆ ಮೊದಲ ಜಯ ಸಿಕ್ಕಂತಾಗಿದೆ. ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಬೆಳಪು ಡಾ. ದೇವಿ ಪ್ರಸಾದ್ ಶೆಟ್ಟಿ ಇದು ನಮ್ಮ ಹೋರಾಟಕ್ಕೆ ಸಂದ ಜಯ. ಕಂಬಳ...
1 24 25 26 27 28 219
Page 26 of 219