ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ವತಿಯಿಂದ ;ಪಾಲಕರ ಸಮಾವೇಶ-ಕಹಳೆ ನ್ಯೂಸ್
ಅಡ್ಯನಡ್ಕ: ಅಡ್ಯನಡ್ಕ ಎಜುಕೇಶನಲ್ ಸೊಸೈಟಿ(ರಿ) ವತಿಯಿಂದ ಪಾಲಕರ ಸಮಾವೇಶ ಕಾರ್ಯಕ್ರಮವು ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಡಿಸೆಂಬರ್ 29ರಂದು ನಡೆಯಿತು. ಸುಂದರ ನಾಳೆಗೆ, ಪಾಲಕರ ಬೆಸುಗೆ ಹಾಗೂ ಸಮೃದ್ಧ ಸುಶಿಕ್ಷಿತ ಕುಟುಂಬ ಬಂಧಕ್ಕೆ ವಿಕಸನದ ದಿವ್ಯ ಸುಗಂಧ ಇದು ಸಮಾವೇಶದ ಘೋಷವಾಕ್ಯವಾಗಿತ್ತು. ಸಮಾವೇಶದಲ್ಲಿ ಮಕ್ಕಳ ವಿಕಸನದಲ್ಲಿ ಪಾಲಕರ ಸ್ನೇಹಶೀಲ ಸಹಭಾಗಿತ್ವ ವಿಷಯದಲ್ಲಿ ಚಿಂತನಗೋಷ್ಠಿ ನಡೆಯಿತು. ಜನತಾ ವಿದ್ಯಾಸಂಸ್ಥೆಗಳು ಅಡ್ಯನಡ್ಕ ಇದರ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ದೀಪ...







