ಕ್ರೀಡೆಯಲ್ಲಿ ಶಿಸ್ತು ಮುಖ್ಯ,ಆರೋಗ್ಯವಂತ ಪ್ರಜೆ ದೇಶದ ಆಸ್ತಿ ಇದ್ದಂತೆ : ಅಬ್ಬಸ್ ಆಲಿ -ಕಹಳೆ ನ್ಯೂಸ್
ಕಲ್ಲಡ್ಕ : ಕ್ರೀಡಾಕೂಟಗಳಲ್ಲಿ ಶಿಸ್ತು ಮುಖ್ಯವಾಗಿದೆ, ಶಿಸ್ತನ್ನು ರೂಡಿಸಿಕೊಂಡ ಕ್ರೀಡಾಪಟು ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಆರೋಗ್ಯವಂತ ಪ್ರಜೆ ದೇಶದ ಆಸ್ತಿ ಇದ್ದಂತೆ ಈ ಅಸ್ತಿ ಶಾಶ್ವತವಾಗಿ ಮುಂದುವರಿಯಬೇಕಾದರೆ ಪಾಠದೊಂದಿಗೆ ಕ್ರೀಡೆಗೂ ಮಹತ್ವ ನೀಡಬೇಕಾದ್ದು ಅಗತ್ಯತೆ ಇದೆ ಎಂದು ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಆಲಿ ಬಿ.ಯಂ ಹೇಳಿದರು. ಅವರು ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಬೋಳಂತೂರು ಹಾಗೂ ದಾರುಲ್ ಅಶ್ ಅರಿಯ್ಯ...







