Thursday, April 23, 2026

ಕಾಸರಗೋಡು

ಕಾಸರಗೋಡುಕೇರಳಮಂಜೇಶ್ವರಸುದ್ದಿ

ಮೆ.04ರಂದು ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಉತ್ಸವಾಂಗಣದ ಮೈದಾನದಲ್ಲಿ ಕಾಶ್ಮೀರ ಹುತಾತ್ಮರಿಗೆ ನಿಡಿ ನಮನ ಹಾಗೂ ಹಿಂದೂ ಜಾಗೃತಿ ಸಮಾವೇಶ – ಕಹಳೆ ನ್ಯೂಸ್

ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಮ್ ಎಡನೀರು ಮಠ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠ ಇದರ ಸಂಯುಕ್ತ ಆಶ್ರಯದಲ್ಲಿ ಮತ್ತು ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಮೆ.04ರಂದು ಐಲ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಉತ್ಸವಾಂಗಣದ ಮೈದಾನದಲ್ಲಿ ಕಾಶ್ಮೀರ ಹುತಾತ್ಮರಿಗೆ ನಿಡಿ ನಮನ ಹಾಗೂ ಹಿಂದೂ ಜಾಗೃತಿ ಸಮಾವೇಶ ನಡೆಯಲಿದೆ.     ಭಾರತ ಮುಕುಟಮಣಿ ಕಾಶ್ಮೀರದ ಪಾಹಲ್ಗಮ್ ನಲ್ಲಿ ಎ.22 ರಂದು ನಡೆದ ಪಾಕಿಸ್ಥಾನಿ ಪ್ರೇರಿತ ದುಷ್ಟ...
ಕಾಸರಗೋಡುಜಿಲ್ಲೆಸುದ್ದಿ

ಸ್ನೇಹಾಲಯ ಹಾಗೂ ಜನಮೈತ್ರಿ ಪೊಲೀಸ್ ಸಂಘಟನೆಯಿಂದ ಉಪ್ಪಳ–ಹೊಸಂಗಡಿಯಲ್ಲಿ ಡ್ರಗ್ ವಿರೋಧಿ ಜನಜಾಗೃತಿ ಕಾರ್ಯಕ್ರಮ-ಕಹಳೆ ನ್ಯೂಸ್

ಕಾಸರಗೋಡು: ಸಮಾಜದೊಳಗೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಮಾದಕವಸ್ತು ದುರುಪಯೋಗದ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಸ್ನೇಹಾಲಯ ಡಿ ಅಡಿಕ್ಶನ್ ಸೆಂಟರ್ ಹಾಗೂ ಮಂಜೇಶ್ವರದ ಜನಮೈತ್ರಿ ಪೊಲೀಸ್ ಠಾಣೆ ಹಾಗೂ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಂಘಟನೆಯ ಜಂಟಿ ಆಶ್ರಯದಲ್ಲಿ ಉಪ್ಪಳ ಹಾಗೂ ಹೊಸಂಗಡಿ ಬಸ್ ನಿಲ್ದಾಣಗಳಲ್ಲಿ ಭಾವಪೂರ್ಣ ಬೀದಿ ನಾಟಕ ಹಾಗೂ ಮೈಮ್ ಕಾರ್ಯಕ್ರಮಗಳು ಏರ್ಪಡಿಸಲ್ಪಟ್ಟವು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಮಾದಕವಸ್ತುಗಳ ಬಳಕೆಯಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳು, ಅದರಲ್ಲೂ...
ಕಾಸರಗೋಡುಸುದ್ದಿ

ಎಡನೀರು ಶ್ರೀ ಮಠಕ್ಕೆ ಎಡತೊರೆ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಭೇಟಿ ; ಶ್ರೀ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳ ಜೊತೆ ಸಂವಾದ – ಕಹಳೆ ನ್ಯೂಸ್

ಕಾಸರಗೋಡು : ಎಡನೀರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಕ್ಕೆ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರಾದ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಭೇಟಿ ನೀಡಿದ್ದಾರೆ. ಶ್ರೀಗಳಿಗೆ ಎಡನೀರು ಮಠದ ವತಿಯಿಂದ ಭವ್ಯ ಸ್ವಾಗತ ಮಾಡಲಾಗಿದ್ದು, 14 ರ ವರೆಗೆ ಮಠದಲ್ಲೇ ಮೊಕ್ಕಾಂ ಹೂಡಲಿದ್ದಾರೆ. ಈ‌ ಸಂದರ್ಭದಲ್ಲಿ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಎಡನೀರು ಮಠಾಧೀಶರಾದ‌ ಶ್ರೀ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳೊಂದಿಗೆ ಸಂವಾದವನ್ನು ನಡೆಸಿದ್ದು, ಆಧ್ಯಾತ್ಮ ಮತ್ತು ಮಠದ ಬಗ್ಗೆ ಕುಶಲೋಪರಿ ಮಾತುಕತೆಗಳನ್ನು ನಡೆಸಿದ್ದಾರೆ....
ಕಾಸರಗೋಡುಜಿಲ್ಲೆಸುದ್ದಿ

ನಿದ್ರೆಯಲ್ಲಿದ್ದ ಮಕ್ಕಳನ್ನು ಬಾವಿಗೆ ನೂಕಿ ಸಾವಿಗೆ ಶರಣಾದ ತಾಯಿ – ಕಹಳೆ ನ್ಯೂಸ್

ಕೇರಳ :ಮನೆಯಲ್ಲಿನ ಬಾವಿಯಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವಿಗೀಡಾದ ದುರ್ಘಟನೆ ಕೇರಳದ ಅಳಿಕೋಡ್​ನಲ್ಲಿ ಸಂಭವಿಸಿದೆ. ಮಧ್ಯರಾತ್ರಿ ಮನೆಯವರು ಮಲಗಿರುವ ವೇಳೆ ಎದ್ದು ಹೊರಬಂದ ಭಾಮಾ (45), ಮಕ್ಕಳಾದ ಶಿವಾನಂದ್ (14) ಮತ್ತು ಅಶ್ವಂತ್ (11) ಇಬ್ಬರನ್ನೂ ನಿದ್ರೆಯಿಂದ ಕರೆತಂದು, ಸಾವಿನ ಕೂಪಕ್ಕೆ ತಳ್ಳಿರಬಹುದು. ಮಕ್ಕಳನ್ನು ತಳ್ಳಿದ ಬಳಿಕ ಆಕೆಯೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಸಂಭವಿಸುವ ಸಮಯದಲ್ಲಿ ಭಾಮಾಳ ತಾಯಿ...
ಅಂಕಣಕಾಸರಗೋಡುದಕ್ಷಿಣ ಕನ್ನಡಬೆಂಗಳೂರುಸಿನಿಮಾಸುದ್ದಿ

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಪ್ರಕಾಶ್ ತೂಮಿನಾಡು ಈಗ ಕರುನಾಡೇ ಕೊಂಡಾಡುವ ಅದ್ಭುತ ಕಲಾವಿದ – ಕಹಳೆ ನ್ಯೂಸ್

ಅವರು ರಿಕ್ಷಾ ಡ್ರೈವರ್ ಆಗಿ ತಮ್ಮ ಜೀವನದ ರಥ ಸಾರಥಿಯನ್ನು ಸಾಗಿಸುತ್ತಿದ್ದವರು. ಜೊತೆಗೆ ಫ್ಲೈವುಡ್ ಫ್ಯಾಕ್ಟರಿಯಲ್ಲಿ, ಫರ್ನೀಚರ್ ಅಂಗಡಿಯಲ್ಲಿ ಹಾಗೂ ಗಾರೆ ಕೆಲಸ ಜೊತೆಗೆ ಸಾಕಷ್ಟು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದವರು. ಆದ್ರೆ ಈಗ ಕರ್ನಾಟಕವೇ ಹೆಮ್ಮೆ ಪಡುವಂತಹ ಕೊಂಡಾಡುವಂತಹ ಖ್ಯಾತ ಕಲಾವಿದ. ಅವರೇ ಪ್ರಕಾಶ್ ತೂಮಿನಾಡು ಎಂಬ ಅದ್ಭುತ ಕಲಾವಿದ. ಹೌದು. ಪ್ರಕಾಶ್ ತೂಮಿನಾಡು ಅವರು ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ಪೋಷಕ ಹಾಗೂ...
ಅಂಕಣಕಾಸರಗೋಡುದಕ್ಷಿಣ ಕನ್ನಡಬದಿಯಡ್ಕಮಂಗಳೂರುಯಕ್ಷಗಾನ / ಕಲೆಸುದ್ದಿ

ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿರುವ ಸಕಲಕಲಾ ವಲ್ಲಭೆ “ವಿದುಷಿ ಮೈತ್ರಿ ಭಟ್ ಮವ್ವಾರು” – ಕಹಳೆ ನ್ಯೂಸ್

ಒಂದೇ ಕಲೆಯನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿದವರು ಅದೆಷ್ಟೋ ಜನ. ಆದ್ರೆ ಬೇರೆ ಬೇರೆ ಕಲೆಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಎನಿಸಿಕೊಂಡವರು ಕೆಲವೇ ಕೆಲವು ಜನ. ಅಂತವರಲ್ಲಿ ವಿದುಷಿ ಮೈತ್ರಿ ಭಟ್ ಮವ್ವಾರು ಕೂಡಾ ಒಬ್ಬರು. ಹೌದು..ಎಂಎಸ್‍ಸಿ ಕಂಪ್ಯೂಟರ್ ಸೈನ್ಸ್ ಪದವೀಧರೆಯಾಗಿರುವ ಮೈತ್ರಿ ಭಟ್ ಅವರಿಗೆ ಬಾಲ್ಯದಲ್ಲೇ ಭರತನಾಟ್ಯ, ಯಕ್ಷಗಾನ ಹಾಗೂ ನಾಟಕಗಳಲ್ಲಿ ಅಪಾರವಾದ ಆಸಕ್ತಿ. ಮೈತ್ರಿ ಭಟ್ ಕಾಸರಗೋಡಿನ ಮವ್ವಾರಿನವರಾಗಿದ್ದು, ಗಣಪತಿ ಭಟ್ ಚಂದ್ರಿಕಾ ಭಟ್ ದಂಪತಿಯ ಪುತ್ರಿ. ಸದ್ಯ...
ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು: ಪೆರಿಯಾದಲ್ಲಿ ಚಿರತೆ ಭೀತಿ, ಕೇಂದ್ರೀಯ ವಿ.ವಿ. ಪರಿಸರದಲ್ಲಿ ರಾತ್ರಿ ಕರ್ಫ್ಯೂ ಜಾರಿ-ಕಹಳೆ ನ್ಯೂಸ್

ಕಾಸರಗೋಡು: ಬೇಡಗಂ, ಅಂಬಲತ್ತರ, ಕಾರಡ್ಕ ಮೊದಲಾದೆಡೆಗಳಲ್ಲಿ ಇತ್ತೀಚೆಗೆ ಕೆಲವು ದಿನಗಳಿಂದ ಚಿರತೆ ಭೀತಿ ಎದುರಾಗಿದ್ದು, ಪೆರಿಯದಲ್ಲಿರುವ ಕೇಂದ್ರೀಯ ವಿ.ವಿ. ಪರಿಸರದಲ್ಲಿ ಚಿರತೆ ಕಂಡಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅರಣ್ಯ ಇಲಾಖೆಗೆ ಚಿರತೆ ಕಂಡಿರುವ ಬಗ್ಗೆ ಮಾಹಿತಿ ನೀಡಿದ್ದು, ಇದರಂತೆ ಮುಂಜಾಗ್ರತಾ ಕ್ರಮದಂಗವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ವಿ.ವಿ.ಯಲ್ಲಿ ಸುಮಾರು 2000 ವಿದ್ಯಾರ್ಥಿಗಳಿದ್ದು, ರಾತ್ರಿ ಹೊತ್ತಿನಲ್ಲಿ ವಿ.ವಿ. ಕ್ಯಾಂಪಸ್‌ನೊಳಗೆ ಇರುವ ಮರಗಳ ಸಮೀಪ ಹೋಗಬಾರದೆಂದೂ, ನಾಯಿ, ಬೆಕ್ಕುಗಳಿಗೆ ಆಹಾರ ನೀಡಬಾರದೆಂದೂ ತಿಳಿಸಲಾಗಿದೆ....
ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು: ಶುದ್ಧ ಭಸ್ಮ ತಯಾರಿಗೆ ಸನಾತನ ಮಾದರಿ-ಕಹಳೆ ನ್ಯೂಸ್

ಕಾಸರಗೋಡು: ಎಲ್ಲವೂ ಕಲಬೆರಕೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಶುದ್ಧ ಭಸ್ಮ ತಯಾರಿಗಾಗಿ ಸನಾತನ ಮಾದರಿಯನ್ನು ಅನುಸರಿಸುತ್ತಿರುವ ಕಾರ್ಯವೊಂದು ನಡೆಯುತ್ತಿದೆ. ದೇಸಿ ದನದ ಸಗಣಿಯಿಂದ ಬೆರಣಿ ತಟ್ಟಿ, ನಿಗದಿತ ದಿನಗಳಲ್ಲಿ ಅದನ್ನು ಸುಟ್ಟು ತಯಾರಿಸುವ ಭಸ್ಮ ಪ್ರಾಕೃತಿಕವಾಗಿರುತ್ತದೆ ಎಂಬುದನ್ನು ಇಲ್ಲಿ ಸಾರಲಾಗಿದೆ. ಏತಡ್ಕ ಸದಾಶಿವ ದೇವಾಲಯದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಶಿವಾರ್ಪಣಂ ಎಂಬ ಯೋಜನೆಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕರ್ತರು ದೇಸಿ ಗೋಮಯವನ್ನು ಸಂಗ್ರಹಿಸಿ ಬೆರಣಿ...
1 2 3 4 19
Page 2 of 19