ಕಾಲೇಜು ಆವರಣದಲ್ಲಿ ತಲವಾರು ಹಿಡಿದು ಕಿಡಿಗೇಡಿಗಳ ದಾಂಧಲೆ- ಕಹಳೆ ನ್ಯೂಸ್
ಮಂಗಳೂರು : ಹುಡುಗರ ಗುಂಪೊ0ದು ತಲವಾರ್ ಹಿಡಿದು ದಾಂಧಲೆ ನಡೆಸಿದ ಘಟನೆ ಬಳ್ಳಾಲ್ ಬಾಗ್ ಸಮೀಪದ ಕಾಲೇಜ್ ಆವರಣದಲ್ಲಿ ಫೆ. 1ರಂದು ಸಂಜೆ ನಡೆದಿದೆ. ವಾಹನಗಳ ನಡುವೆ ಢಿಕ್ಕಿಯಾದ ವಿಚಾರಕ್ಕೆ ಸಂಬಂಧಿಸಿ, ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ವಲ್ಪ ಸಮಯದ ನಂತರ ಯುವಕರ ತಂಡವೊಂದು ತಲವಾರು ಸಮೇತ ಕಾಲೇಜು ಬಳಿ ಆಗಮಿಸಿ ಕೆಲವು ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದೆ. ತಲವಾರ್ ಹಿಡಿದು ಕಾಲೇಜಿಗೆ ಬಂದ ಕಿಡಿಗೇಡಿಗಳ ವಿಡಿಯೋವನ್ನು ವಿದ್ಯಾರ್ಥಿಗಳು ರೆಕಾರ್ಡ್...







