Saturday, March 7, 2026

ವಾಣಿಜ್ಯ

ವಾಣಿಜ್ಯ

ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಗುಡ್ ನ್ಯೂಸ್ : ಈರುಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ – ಕಹಳೆ ನ್ಯೂಸ್

ಬೆಂಗಳೂರು : ಕಳೆದ ಎರಡು ಮೂರು ತಿಂಗಳಿಂದ ನಿರಂತರವಾಗಿ ದರ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದೀಗ ನೆಮ್ಮದಿಯ ಸುದ್ದಿ ಸಿಕ್ಕಿದ್ದು, ಈರುಳ್ಳಿ ಬೆಲೆ ಈಗ ಕೊಂಚ ಇಳಿಮುಖವಾಗಿದೆ. ಹೀಗಾಗಿ ಈರುಳ್ಳಿ ಗ್ರಾಹಕರು ಸ್ವಲ್ಪ ರಿಲೀಫ್ ಆಗಿದ್ದಾರೆ.  ಕಳೆದ ವಾರ ಇದ್ದ ದರಕ್ಕಿಂತ ಈರುಳ್ಳಿ ದರ ಸದ್ಯ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.   ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ 60 ರಿಂದ 70 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಕಡಿಮೆ ಗುಣಮಟ್ಟದ ಈರುಳ್ಳಿ ಒಂದು ಕೆಜಿಗೆ 30 ರಿಂದ 40 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಈರುಳ್ಳಿ ಬೆಲೆ ದಿಢೀರ್ ಇಳಿಕೆಯಾದ್ದರಿಂದ ಗ್ರಾಹಕರು ನಿರಾಳವಾಗಿದ್ದಾರೆ. ರಾಜಸ್ಥಾನ, ಮಹಾರಾಷ್ಟ್ರ ಭಾಗಗಳಿಂದ ಹೊಸದಾಗಿ ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಯಶವಂತಪುರ ಎಪಿಎಂಸಿಯಲ್ಲಿ...
ವಾಣಿಜ್ಯ

ಹೊಸ ವರ್ಷಕ್ಕೆ ಮುನ್ನವೇ ‘ಹ್ಯಾಪಿ ನ್ಯೂ ಇಯರ್’ ಎಂದ ಜಿಯೋ ಗ್ರಾಹಕರಿಗೆ ಕೊಟ್ಟ ಕೊಡುಗೆ ಏನು ಗೊತ್ತಾ – ಕಹಳೆ ನ್ಯೂಸ್

ಟೆಲಿಕಾಂ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸವರ್ಷಕ್ಕೆ  '2020 ಹ್ಯಾಪಿ ನ್ಯೂ ಇಯರ್ ಆಫರ್' ಅನ್ನು ಬಿಡುಗಡೆ ಮಾಡಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು ಎರಡು ಬಗೆಯಲ್ಲಿ ಲಭ್ಯವಿದೆ. ಒಂದು  ಜಿಯೋ ಫೋನ್ ಗ್ರಾಹಕರಿಗೆ ಮತ್ತು ಇನ್ನೊಂದು ಇತರ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ರೀಚಾರ್ಜ್ ಕೊಡುಗೆಯಾಗಿದೆ. ಜಿಯೋ ಟೆಲಿಕಾಂ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸವರ್ಷಕ್ಕೆ  '2020 ಹ್ಯಾಪಿ ನ್ಯೂ...
ವಾಣಿಜ್ಯ

ಈರುಳ್ಳಿ ಆಯ್ತು,‌ ಇದೀಗ ಅಡುಗೆ ಎಣ್ಣೆ ಬೆಲೆ‌ ಏರಿಕೆ-ಕಹಳೆ ನ್ಯೂಸ್

ವಿಶ್ವಮಟ್ಟದಲ್ಲಿ‌ ಸುದ್ದಿಯಾಗಿದ್ದ ಭಾರತದಲ್ಲಿನ ಈರುಳ್ಳಿ‌ ಹಾಗೂ ಬೆಳ್ಳುಳ್ಳಿ ಬೆಲೆ‌ ಇಳಿಕೆಯಾಗುವ ಮೊದಲೇ ಅಡುಗೆ ಎಣ್ಣೆ ‌ದರ ಏರುವ‌ ಆತಂಕ ಸೃಷ್ಟಿಯಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಪಾಮ್ ಆಯಿಲ್ ಬೆಲೆ ಸುಮಾರು 20 ರೂ. ಏರಿಕೆಯಾಗಿದೆ. ಇದು ಸುಮಾರು 35% ಏರಿಕೆಯಾದಂತೆ. ಮಲೇಷ್ಯಾ ಹಾಗೂ ಇಂಡೋನೇಷ್ಯಾದಲ್ಲಿ ಸುಂಕ ದರ ಹೆಚ್ಚಾಗಿರುವುದು‌ ಇದಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಲೀಲ್ ಜೈನ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ತೈಲ ಬೆಲೆ‌...
ವಾಣಿಜ್ಯ

ಸದ್ಯದಲ್ಲೇ ಶೇಕಡಾ 80ರಷ್ಟು ಔಷಧಗಳ ಬೆಲೆಯಲ್ಲಿ ಇಳಿಕೆ – ಕಹಳೆ ನ್ಯೂಸ್

ಸದ್ಯದಲ್ಲೇ ಶೇಕಡಾ 80ರಷ್ಟು ಔಷಧಗಳ ಬೆಲೆಯಲ್ಲಿ ಇಳಿಕೆ ಸರಕಾರದ ಬೆಲೆ ನಿಯಂತ್ರಣದ ಹೊರಗಿನ ಎಲ್ಲಾ ಔಷಧಗಳ ಮಾರಾಟದಲ್ಲಿ ಗರಿಷ್ಟ ಶೇಕಡಾ 30ರಷ್ಟು ಲಾಭದ ಅಂಶಕ್ಕೆ(ಮಾರ್ಜಿನ್) ಮಿತಿ ವಿಧಿಸುವ ಸರ್ಕಾರದ ಪ್ರಸ್ತಾಪಕ್ಕೆ ದೇಶೀಯ ಔಷಧ ಉದ್ಯಮ ಮತ್ತು ವ್ಯಾಪಾರವು ಸಮ್ಮತಿಸಿವೆ. ಈ ಮೂಲಕ ಶೇಕಡಾ 80ರಷ್ಟು ಔಷಧಗಳ ಬೆಲೆಯಲ್ಲಿ ಸದ್ಯದಲ್ಲೇ ಇಳಿಕೆ ಕಾಣಲಿದೆ. ಬಡವರಿಗೆ ಹೆಚ್ಚು ಅನುಕೂಲವಾಗುವಂತೆ ಔಷಧ ಬೆಲೆಗಳ ಮೇಲಿನ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರವು, ಲಾಭದ ಅಂಶಕ್ಕೆ(ಮಾರ್ಜಿನ್) ಮಿತಿ ವಿಧಿಸುವಂತೆ...
ವಾಣಿಜ್ಯ

ಮಂಗಳೂರು: ಗ್ರಾಹಕರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ ದರ – ಕಹಳೆ ನ್ಯೂಸ್

ಮಂಗಳೂರು: ಈರುಳ್ಳಿ ಬೆಲೆ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದ್ದು, ಇದೀಗ ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಿಲೋವೊಂದಕ್ಕೆ ನೂರು ರೂಪಾಯಿಯನ್ನೂ ಗಡಿ ದಾಟಿದೆ. ನಗರದ ಮಾರುಕಟ್ಟೆಗೆ ಸ್ಥಳೀಯ ಸರಬರಾಜುದಾರರಿಂದ ಪೊರೈಕೆಯಾಗುತ್ತಿರುವ ಈರುಳ್ಳಿಯ ಪ್ರಮಾಣದಲ್ಲಿ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈಜಿಪ್ಟಿನ ಈರುಳ್ಳಿಯನ್ನು ಕೆಲವು ವ್ಯಾಪಾರಿಗಳು ಮಾರುಕಟ್ಟೆಗೆ ಆಮದು ಮಾಡಿಕೊಂಡಿದ್ದಾರೆ. ಆದರೂ ಎರಡೇ ದಿನದಲ್ಲಿ ಈರುಳ್ಳಿ ದರ ನೂರರ ಗಡಿ ದಾಟಿರುವುದು ಗ್ರಾಹಕರಿಗೆ ಆತಂಕವನ್ನುಂಟು ಮಾಡಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ಕೆ.ಜಿ.ಗೆ...
ವಾಣಿಜ್ಯ

ತರಕಾರಿಗಳು ಹಾಗೂ ಹೂಗಳ ಧಾರಣೆ ಈ ವಾರ ದುಬಾರಿ

ಮೈಸೂರು: ತರಕಾರಿಗಳು ಹಾಗೂ ಹೂಗಳ ಧಾರಣೆ ಈ ವಾರ ದುಬಾರಿಯಾಗಿದ್ದು, ಬಡವರು ಮತ್ತು ಮಧ್ಯಮವರ್ಗದವರು ಖರೀದಿಸಲು ಪರದಾಡುವ ಸನ್ನಿವೇಶ ಎದುರಾಗಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಸುರಿಯುತ್ತಿರುವ ಇಬ್ಬನಿಯಿಂದ ಹೂಗಳ ಇಳುವರಿಯಲ್ಲಿ ಕುಸಿತ ಉಂಟಾಗಿದೆ. ಒಂದೆಡೆ ಮಾರಕಟ್ಟೆಗೆ ಬರುತ್ತಿರುವ ಹೂವಿನ ಆವಕದಲ್ಲಿ ಕಡಿಮೆಯಾದರೆ ಮತ್ತೊಂದೆಡೆ ಕಡೆ ಕಾರ್ತೀಕ ಸೋಮವಾರದ ಪ್ರಯುಕ್ತ ಹೂಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸಹಜವಾಗಿಯೇ ಬೆಲೆ ಏರಿಕೆಯಾಗಿದೆ. 'ಸಾಮಾನ್ಯವಾಗಿ ಕೆ.ಜಿಗೆ ₹ 120ಕ್ಕೆ ಮಾರಾಟವಾಗುತ್ತಿದ್ದ ಸೇವಂತಿಗೆ ಈಗ ₹ 200...
ವಾಣಿಜ್ಯ

ನವೆಂಬರ್ 30 ರಂದು ಪುತ್ತೂರಿನ ಮಹಾಮಾಯಿ ದೇವಸ್ಥಾನದ ಬಳಿಯ ಕ್ಯಾಂಪ್ಕೋ ಬಿಲ್ಡಿಂಗ್ ನಲ್ಲಿ ಪ್ರಧಾನಮಂತ್ರಿ ಜನಔಷಧಿ ಕೇಂದ್ರದ ಉದ್ಘಾಟನೆ ; ಕಲ್ಲಡ್ಕ ಭಟ್, ಡಿ.ವಿ.ಎಸ್., ನಳೀನ್ ಭಾಗಿ – ಕಹಳೆ ನ್ಯೂಸ್

ಪುತ್ತೂರು : ನಗರದ ಮಹಾಮಾಯಿ ದೇವಸ್ಥಾನದ ಬಳಿಯ ಕ್ಯಾಂಪ್ಕೋ ಬಿಲ್ಡಿಂಗ್ ನಲ್ಲಿ ಪ್ರಧಾನಮಂತ್ರಿ ಜನಔಷಧಿ ಕೇಂದ್ರದ ನೂತನವಾಗಿ ಆರಂಭಗೊಳ್ಳಲಿದ್ದು, ಇದರ ಉದ್ಘಾಟನಾ ಸಮಾರಂಭವು ಇದೇ ತಿಂಗಳ 30 ರಂದು ಬೆಳಗ್ಗೆ 10.00 ಗಂಟೆಗೆ ನಡೆಯಲಿದೆ. ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕೆ. ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಲಿದ್ದು, ಜನ ಔಷಧಿ ಕೇಂದ್ರದ ಉದ್ಘಾಟನೆಯನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಾನ್ಯ ಸಂಸದ ನಳೀನ್...
ವಾಣಿಜ್ಯ

ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ: ಕರಾವಳಿಯಲ್ಲಿ ʼಶತಕʼ ಬಾರಿಸಿದ ದರ – ಕಹಳೆ ನ್ಯೂಸ್

ಮಂಗಳೂರು: ಕಳೆದ 5 ದಿನಗಳಿಂದ ಕರಾವಳಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ. ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. 4-5 ದಿನಗಳ ಹಿಂದೆ ಕೆಜಿ ಈರುಳ್ಳಿಗೆ 80 ರೂಪಾಯಿ ಇದ್ದ ದರ 90 ರಿಂದ 96 ರೂಪಾಯಿಗೆ ಏರಿಕೆಯಾಗಿದೆ. ಹೊಸ ಈರುಳ್ಳಿಗೆ 60 ರಿಂದ 80 ರೂಪಾಯಿಗಳಾಗಿದ್ದು, ಸಣ್ಣ ಈರುಳ್ಳಿ ಬೆಲೆ 40 ರಿಂದ 50 ರೂಪಾಯಿ ದರ ಇದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈರುಳ್ಳಿ...
1 13 14 15 16 17
Page 15 of 17