ನಾಳೆ ಎನ್ಇಪಿ ಕುರಿತ ರಾಜ್ಯಪಾಲರ ಸಮಾವೇಶ : ರಾಷ್ಟ್ರಪತಿ, ಪ್ರಧಾನಿ ಭಾಷಣ – ಕಹಳೆ ನ್ಯೂಸ್
ನವದೆಹಲಿ, ಸೆ.6-ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಕುರಿತ ರಾಜ್ಯಪಾಲರ ಮಹತ್ವದ ಸಮಾವೇಶ ನಾಳೆ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಲಿಂಕ್ ಮೂಲಕ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯದಿಂದ ಆಯೋಜಿಸಿರುವ ಈ ಸಮಾವೇಶವು ಉನ್ನತ ಶಿಕ್ಷಣದ ಪರಿವರ್ತನೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಪಾತ್ರ-2020 ಎಂಬ ಶೀರ್ಷಿಕೆ ಹೊಂದಿದೆ. ರಾಜ್ಯಪಾಲರ ಈ ಸಮಾವೇಶದಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರು, ರಾಜ್ಯಗಳ...







