ಉತ್ತರಾಖಂಡ ಹಿಮ ಪ್ರವಾಹ ; ಆರನೇ ದಿನವೂ ಮುಂದುವರೆದ ರಕ್ಷಣಾ ಕಾರ್ಯಾಚರಣೆ-ಕಹಳೆ ನ್ಯೂಸ್
ಉತ್ತರಾಖಂಡ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದ ಪರಿಣಾಮ ಸಂಭವಿಸಿರುವ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ಶುಕ್ರವಾರ ಆರನೇ ದಿನ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಹಿನ್ನೆಲೆ ಸುರಂಗದೊಳಗೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆ ಸಿಬ್ಬಂದಿಗಳು ಹೊರಕ್ಕೆ ಬಂದಿದ್ದು, ಸುರಂಗದೊಳಗೆ ಕೆಸರು ಮತ್ತು ಅವಶೇಷ ತೆಗೆಯುತ್ತಿದ್ದ ಭಾರೀ ಯಂತ್ರಗಳನ್ನು ಸಹ ಹೊರತೆಗೆಯಲಾಗಿತ್ತು. ಪ್ರಮಾಹದಿಂದ ಇಲ್ಲಿಯವರೆಗೆ 36 ಮಂದಿ ಸಾವನ್ನಪ್ಪಿದ್ದು, 204ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ...







