Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ನಾಳೆ ಆನ್‍ಲೈನ್‍ದಲ್ಲಿ ‘ಸನಾತನ ಪ್ರಭಾತ’ದ 22 ನೇ ವಧರ್ಂತ್ಯುತ್ಸವ-ಕಹಳೆ ನ್ಯೂಸ್

ಕಳೆದ 22 ವರ್ಷಗಳಿಂದ ಹಿಂದೂಗಳಿಗೆ ಧರ್ಮಶಿಕ್ಷಣ, ರಾಷ್ಟ್ರ ಹಾಗೂ ಧರ್ಮದ ರಕ್ಷಣೆಗಾಗಿ ಪ್ರಬೋಧನೆ ಮಾಡುತ್ತಿರುವ ಕನ್ನಡ ವಾರ ಪತ್ರಿಕೆ ಸನಾತನ ಪ್ರಭಾತದ 22 ನೇ ವಧರ್ಂತ್ಯುತ್ಸವವು ನಾಳೆ  ಆನ್‍ಲೈನ್‍ನಲ್ಲಿ ಇರಲಿದೆ. ತಾವೆಲ್ಲರೂ ತಪ್ಪದೇ ಭಾಗವಹಿಸಬೇಕೆಂದು ಕರೆ ನೀಡುತ್ತಿದ್ದು, ಇಲ್ಲಿ ನಾಳೆ ಸಂಜೆ 6.00 ರಿಂದ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರುಗಳಾದ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ಕರಿಜೆ ಮಠ, ದ.ಕ. ಜಿಲ್ಲೆ, ಪೂ. ರಮಾನಂದ ಗೌಡ, ಧರ್ಮಪ್ರಚಾರಕರು,...
ಹೆಚ್ಚಿನ ಸುದ್ದಿ

ಮಚ್ಚಿನ ಗ್ರಾ.ಪಂ ಅಧ್ಯಕ್ಷರಾಗಿ ಚಂದ್ರಕಾಂತ ನಿಡ್ಡಾಜೆ ಮತ್ತು ಉಪಾಧ್ಯಕ್ಷರಾಗಿ ಡೀಕಮ್ಮ ಅಶೋಕ್ ಕುಲಾಲ್ ಅವಿರೋಧ ಆಯ್ಕೆ-ಕಹಳೆ ನ್ಯೂಸ್

ಮಚ್ಚಿನ : ಮಚ್ಚಿನ ಗ್ರಾಮ ಪಂಚಾಯತ್‍ನ 14 ಸ್ಥಾನಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದು, ಅಧ್ಯಕ್ಷರಾಗಿ ಚಂದ್ರಕಾಂತ ನಿಡ್ಡಾಜೆ ಹಾಗೂ ಉಪಾಧ್ಯಕ್ಷರಾಗಿ ಡೀಕಮ್ಮ ಅಶೋಕ್ ಕುಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷರಾಗಿ ಸಾಮಾನ್ಯ ಮಹಿಳೆ ಸ್ಥಾನ ಮೀಸಲಾತಿ ನಿಗದಿಯಾಗಿದ್ದು, ಮಚ್ಚಿನ ವಾರ್ಡ್-4 ರಿಂದ ಚಂದ್ರಕಾಂತ ನಿಡ್ಡಾಜೆ ಹಾಗೂ 5ನೇ ವಾರ್ಡ್‍ನಿಂದ ಡೀಕಮ್ಮ ಅಶೋಕ್ ಕುಲಾಲ್ ಸ್ಪರ್ಧಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಶೇಷ ಗಿರಿ...
ಹೆಚ್ಚಿನ ಸುದ್ದಿ

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ, ಒರ್ವ ಸಜೀವ ದಹನ-ಕಹಳೆ ನ್ಯೂಸ್

ತಮಿಳುನಾಡು : ವಿರುಧಾನಗರದ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸಂಜೆ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಒರ್ವ ವ್ಯಕ್ತಿ ಜೀವಂತ ಭಸ್ಮವಾಗಿದ್ದಾನೆ. ಭೀಕರ ಬೆಂಕಿ ಅವಘಾಡದಿಂದ ಪಟಾಕಿ ಕಾರ್ಖಾನೆಯು ಹೊತ್ತಿ ಉರಿಯುತ್ತಿದ್ದು, ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಸಾವನ್ನಪ್ಪಿದ ಘಟನೆ ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ....
ಹೆಚ್ಚಿನ ಸುದ್ದಿ

ವಿಜಯಪುರದಲ್ಲಿ ಜಮೀನಿನಲ್ಲಿ ಆಟವಾಡುತ್ತ ಇದ್ದ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವು-ಕಹಳೆ ನ್ಯೂಸ್

ವಿಜಯಪುರ : ಕೊಲಾರ ತಾಲೂಕಿನ ಚಿಕ್ಕ ಆಸಂಗಿ ಗ್ರಾಮದಲ್ಲಿ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ. ಚಿಕ್ಕಆಸಂಗಿ ಗ್ರಾಮದ 4 ವರ್ಷದ ಆಕಾಶ ಮಹಾದೇವ ಬೆನ್ನೂರ ಮತ್ತು 4 ವರ್ಷದ ಬೋರಮ್ಮ ಸಂಗಣ್ಣ ಬೆನ್ನೂರು ಸಾವನ್ನಪ್ಪಿರುವ ಕಂದಮ್ಮಗಳು. ಮನೆಹತ್ತಿರ ಇದ್ದ ಚಿಕ್ಕಪ್ಪನ ಮನೆಯ ಜಮೀನಿನಲ್ಲಿ ಆಟವಾಡುತ್ತಾ ಅಲ್ಲಿರುವ ಕೃಷಿ ಹೊಂಡದಲ್ಲಿ ಬಿದ್ದು ಪುಟ್ಟ ಕಂದಮ್ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕೊಲಾರ ಪಿಎಸ್‍ಐ ಸಿದ್ದಪ್ಪ ಯಡಹಳ್ಳಿ...
ಹೆಚ್ಚಿನ ಸುದ್ದಿ

ಇಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಕೆಡ್ಡಸ ಆಚರಣೆ-ಕಹಳೆ ನ್ಯೂಸ್

ಕಲ್ಲಡ್ಕ : ಇಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ “ಕೆಡ್ಡಸ” ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಉಪಸ್ಥಿತಿಯಲ್ಲಿ, ತುಳಸಿ ಕಟ್ಟೆಯ ಮುಂದೆ ಗೋಮಯದಿಂದ ಶುದ್ದೀಕರಿಸಿ ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸಿ, ಭೂಮಿ ದೇವಿಯ ಸಾನಿಧ್ಯ ರಚಿಸಿ , ದೀಪ ಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಪುಡಿ, ಅರಿಸಿನ ಕುಂಕುಮ, ಪಚ್ಚೆ ಹೆಸರುಪುಡಿ, ವೀಳೆದ್ಯೆಲೆ...
ಹೆಚ್ಚಿನ ಸುದ್ದಿ

ವಿಜಯಪುರದ ವಿಶ್ವೇಶ್ವರ ಕಾಲನಿ ಸಿಟಿಬಸ್ ನಿಲ್ದಾಣದಲ್ಲಿ ಮಲಗಿದ್ದ ಭಿಕ್ಷುಕನ್ನು ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು-ಕಹಳೆ ನ್ಯೂಸ್

ವಿಜಯಪುರ : ವಿಜಯಪುರದ ವಿಶ್ವೇಶ್ವರ ಕಾಲನಿ ಸಿಟಿಬಸ್ ನಿಲ್ದಾಣದಲ್ಲಿ ಮಲಗಿದ್ದ ಭಿಕ್ಷುಕನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ನಡೆದಿದೆ. ಈ ಭಿಕ್ಷುಕ, ಕಳೆದ ಮೂರ್ನಾಲ್ಕು ತಿಂಗಳಿಂದ ಬಸ್ ನಿಲ್ದಾಣದಲ್ಲೆ ವಾಸಿಸುತ್ತಿದ್ದ, ನಿನ್ನೆ ತಡರಾತ್ರಿ ಘಟನೆ ನಡೆದಿರಬಹುದು ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಆದರ್ಶನಗರ ಪಿಎಸ್‍ಐ ಶರಣಬಸಪ್ಪ ಅಜೂರ ಹಾಗೂ ಶ್ವಾನ ದಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಕುರಿತು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಹೆಚ್ಚಿನ ಸುದ್ದಿ

ಮತ್ತೆ ಏರಿಕೆಯಾದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ-ಕಹಳೆ ನ್ಯೂಸ್

ನವದೆಹಲಿ : ತೈಲ ಮಾರುಕಟ್ಟೆ ಕಂಪೆನಿಗಳು ಮತ್ತೆ ತೈಲ ಬೆಲೆಗಳನ್ನು ಶುಕ್ರವಾರ ಏರಿಸಿದ್ದು, ದೆಹಲಿಯಲ್ಲಿ 87.85 ರೂ ಇದ್ದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ 88.14 ರೂ ಬಂದು ತಲುಪುವುದರ ಮೂಲಕ 29 ಪೈಸೆ ಹೆಚ್ಚಳವಾಗಿದೆ. ಇನ್ನು ಡಿಸೇಲ್ ಪ್ರತಿ ಲೀಟರ್ ಗೆ 25 ಪೈಸೆ ಹೆಚ್ಚಳವಾಗುವುದರ ಮೂಲಕ 78.03 ರೂ ಇದ್ದ ಬೆಲೆ 78.38 ರೂ ಆಗಿದೆ. ಹಾಗೂ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.64...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ಮನೆಯಲ್ಲಿದ್ದ ಮಗು ಏಕಾಏಕಿ ನಾಪತ್ತೆ ; ಹುಡುಕಿದಾಗ ಹತ್ತಿರದ ಪ್ಲ್ಯಾಟ್‍ನಲ್ಲಿ ನಿದ್ರಿಸುತ್ತಿದ್ದ ಮಗು-ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯಲ್ಲಿ ಮನೆಯ ಹತ್ತಿರ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗು ಏಕಾಏಕಿ ನಾಪತ್ತೆಯಾಗಿದ್ದು, ಮನೆ ಮಂದಿಯೆಲ್ಲಾ ಭಯಬೀತರಾದ ಘಟನೆ ನಡೆದಿದೆ. ನಾಪತ್ತೆಯಾಗಿದ್ದ ಮಗುವನ್ನು ಹಳೇ ಬಸ್ ನಿಲ್ದಾಣದ ವಸತಿ ಸಮುಚ್ಚದಲ್ಲಿ ಬಾಡಿಗೆಗಿರುವ ಅಶ್ರಫ್ ಪುತ್ರ ಇಹಾನ್ ಎಂದು ಗುರುತಿಸಲಾಗಿದೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಪಕ್ಕದಲ್ಲೇ ಇರುವ ನಾಲ್ಕು ಮಾಳಿಗೆಯ ಇನ್ನೊಂದು ವಸತಿ ಸಮುಚ್ಚಯದ ತಾರಸಿಯ ಮೇಲೆ ಹೋಗಿ...
1 99 100 101 102 103 174
Page 101 of 174