ಕುಂಭಮೇಳ ಕಾಲ್ತುಳಿತ ʼದುರದೃಷ್ಟಕರʼ ಎಂದ ಸುಪ್ರೀಂ: ಅರ್ಜಿ ತಿರಸ್ಕಾರ-ಕಹಳೆ ನ್ಯೂಸ್
ಹೊಸದಿಲ್ಲಿ: ಮಹಾ ಕುಂಭಮೇಳದಲ್ಲಿ ಜನವರಿ 29 ರಂದು 30 ಜನರ ಪ್ರಾಣವನ್ನು ಬಲಿ ಪಡೆದ ಕಾಲ್ತುಳಿತವನ್ನು ಸೋಮವಾರ (ಫೆ.03) ಸುಪ್ರೀಂ ಕೋರ್ಟ್ “ದುರದೃಷ್ಟಕರ” ಘಟನೆ ಎಂದು ಕರೆದಿದೆ. ಆದರೆ ಉತ್ತರ ಪ್ರದೇಶದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿದೆ. ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿ ಎಂದು ಅರ್ಜಿದಾರ ವಕೀಲ ವಿಶಾಲ್ ತಿವಾರಿ ಅವರಿಗೆ ಸರ್ವೋಚ್ಛ ನ್ಯಾಯಾಲಯ ಹೇಳಿದೆ. “ಇದು ದುರದೃಷ್ಟಕರ ಘಟನೆ ಮತ್ತು ಕಳವಳಕಾರಿ...







