ಹುಬ್ಬಳ್ಳಿ ಗಲಭೆ | ತಲೆಮರೆಸಿಕೊಂಡಿದ್ದ ಮಾಸ್ಟರ್ ಮೈಂಡ್ ಆರೋಪಿ, ಮೌಲ್ವಿ ವಸೀಂ ಮುಂಬೈಯಲ್ಲಿ ಪೊಲೀಸ್ ವಶಕ್ಕೆ – ಕಹಳೆ ನ್ಯೂಸ್
ಹುಬ್ಬಳ್ಳಿ, ಏ 21 : ಹಳೆ ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ಮಂಟೂರ ರಸ್ತೆ ಮಿಲ್ಲತ್ ನಗರದ ವಸೀಂ ಪಠಾಣ್ನನ್ನು ಮುಂಬೈನಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿ ಗುರುವಾರ ನಗರಕ್ಕೆ ಕರೆ ತಂದಿದ್ದಾರೆ. ಗಲಭೆ ವೇಳೆ ಆರೋಪಿಯು ಪೊಲೀಸ್ ವಾಹನ ಏರಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದ ಎನ್ನಲಾದ ವೀಡಿಯೋ ವೈರಲ್ ಆಗಿತ್ತು. ಆತನ ಮೇಲೆ ಆರೋಪ ಬರುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ. ಆತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಈ ನಡುವೆ ವಸೀಂ ವೀಡಿಯೋವೊಂದನ್ನು ಹರಿಬಿಟ್ಟು...







