Saturday, March 7, 2026

ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯಸುದ್ದಿ

ಉಕ್ರೇನ್ ನಿಂದ ಸ್ವದೇಶಕ್ಕೆ ಆಗಮಿಸಿದ 242 ಭಾರತೀಯರು – ಕಹಳೆ ನ್ಯೂಸ್

ನವದೆಹಲಿ: ಯುದ್ದ ಸ್ಫೋಟದ ಭೀತಿಯಲ್ಲಿರುವ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ಏರ್ ಲಿಫ್ಟ್ ಗೆ ಭಾರತ ಚಾಲನೆ ನೀಡಿದೆ. ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ 242 ಭಾರತೀಯರು ಸ್ವದೇಶಕ್ಕೆ ಆಗಮಿಸಿದ್ದು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡ ರಾತ್ರಿ ವಿಮಾನ ಬಂದಿಳಿದಿದೆ. ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿದ್ದ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಹಿಂತಿರುಗಿದ್ದಾರೆ. ಸ್ವದೇಶಕ್ಕೆ ಮರಳಿರುವುದು ತುಂಬಾ ಸಂತೋಷವಾಗಿದೆ. ಪರಿಸ್ಥಿತಿ ಅತ್ಯಂತ ಉದ್ವಿಗ್ನತೆಯಿಂದ ಕೂಡಿದೆ ಎಂದು...
ಅಂತಾರಾಷ್ಟ್ರೀಯಸುದ್ದಿ

18 ವರ್ಷದ ಹುಡುಗಿಯ ಜೊತೆ 49 ವರ್ಷದ ಪಾಕಿಸ್ತಾನ ಸಂಸದನ ಮೂರನೇ ಮದುವೆ! – ಕಹಳೆ ನ್ಯೂಸ್

ಲಾಹೋರ್, ಫೆ 13 : ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್-ತೆಹ್ರಿಕ್ -ಇ-ಇನ್ಸಾಫ್‌ ಪಕ್ಷ ಸಂಸದ ಡಾ.ಅಮೀರ್ ಲಿಯಾಖತ್‌ನೇ 18 ವರ್ಷದ ಯುವತಿಯನ್ನು ಮೂರನೇ ಮದುವೆಯಾಗಿ ಸುದ್ದಿಯಾಗಿದ್ದಾರೆ, ಪಾಕಿಸ್ತಾನದಲ್ಲಿ ಮೂರು ಮದುವೆಯಾಗಲು ಅನುಮತಿಯಿದ್ದರೂ ಇಬ್ಬರ ವಯಸ್ಸಿನ ಅಂತರದ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಅಮೀರ್ ಲಿಯಾಖತ್‌ಗೆ ಇದು ಮೂರನೇ ಮದುವೆ. ಅವರ ಎರಡನೇ ಪತ್ನಿ ವಿಚ್ಛೇದನವನ್ನು ಘೋಷಿಸಿದ ದಿನವೇ ಮೂರನೇ ಮದುವೆ ನಡೆದಿದೆ. ತಮ್ಮ ಮೂರನೇ ಮದುವೆಯ ಫೋಟೋವನ್ನು ಅಮೀರ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು....
ಅಂತಾರಾಷ್ಟ್ರೀಯ

ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಮಾಜಿ ಮಿಸ್ ಯುಎಸ್‍ಎ – ಕಹಳೆ ನ್ಯೂಸ್

ನ್ಯೂಯಾರ್ಕ್: ಮಾಜಿ ಮಿಸ್ ಅಮೆರಿಕ ಮಾಡೆಲ್ ಚೆಸ್ಲಿ ಕ್ರಿಸ್ಟ್ ಜೀವನದಲ್ಲಿ ಜಿಗುಪ್ಸೆಗೊಂಡು ನ್ಯೂಯಾರ್ಕ್‍ನ ಮ್ಯಾನ್ ಹ್ಯಾಟನ್ ಪ್ರದೇಶದ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಚೆಸ್ಲಿ ನಿಧನದಿಂದ ನಮಗೆ ತೀವ್ರ ಆಘಾತವಾಗಿದೆ‘ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. 30 ವರ್ಷದ ಈ ಮಾಡೆಲ್ 2019 ರಲ್ಲಿ ಮಿಸ್ ಯುಎಸ್‍ಎ ಪಟ್ಟ ಗೆದ್ದಿದ್ದರು. ಅಮೆರಿಕದ ಮನರಂಜನಾ ಚಾನೆಲ್ ಎಕ್ಸ್ ಟ್ರಾ ಟಿವಿ ನಿರೂಪಕಿಯಾಗಿ ಗಮನ ಸೆಳೆದಿದ್ದ ಮೊಡೆಲ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ “ಈ...
ಅಂತಾರಾಷ್ಟ್ರೀಯಹೆಚ್ಚಿನ ಸುದ್ದಿ

ಮನುಷ್ಯನಿಗೆ ಹಂದಿ ಹೃದಯದ ಕಸಿ…!! ಅಮೆರಿಕಾ ವೈದರ  ಶಸ್ತ್ರಚಿಕಿತ್ಸೆ ಯಶಸ್ವಿ – ಕಹಳೆ ನ್ಯೂಸ್

ವಾಷಿಂಗ್ಟನ್ : 57 ವರ್ಷದ ವ್ಯಕ್ತಿಯೊಬ್ಬರಿಗೆ ತಳೀಯವಾಗಿ ಮಾರ್ಪಡಿಸಿದ ಹಂದಿಯ ಹೃದಯವನ್ನು ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸುವಲ್ಲಿ ಯುಎಸ್‍ನ ವೈದ್ಯರು ಯಶಸ್ವಿಯಾಗಿದ್ದಾರೆ.   ಅಂಗ ದಾನಗಳ ದೀರ್ಘಕಾಲದ ಕೊರತೆಯನ್ನು ಪರಿಹರಿಸಲು ಈ ಪ್ರಕ್ರಿಯೆ ಸಹಕಾರಿಯಾಗಲಿದ್ದು, ಸದ್ಯದ ಮಟ್ಟಿಗೆ ಪ್ರಾಣಿಯಿಂದ ಮಾನವ ಕಸಿಯು ಪ್ರಮುಖ ಮೈಲಿಗಲ್ಲಾಗಿದೆ. ಡೇವಿಡ್ ಬೆನೆಟ್ ನ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಆತನಿಗೆ ಹಂದಿ ಹೃದಯ ಅಳವಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಇನ್ನು ಹೃದಯ-ಶ್ವಾಸಕೋಶದ ಬೈಪಾಸ್ ಮೆಷಿನ್ ಸಮಸ್ಯೆಯಿಂದ ಕಳೆದ ಹಲವು...
ಅಂತಾರಾಷ್ಟ್ರೀಯಬೆಂಗಳೂರುರಾಜ್ಯಸುದ್ದಿ

 ಓಮಿಕ್ರಾನ್‌ ಪೀಡಿತ ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಆಗಮಿಸಿ ನಾಪತ್ತೆಯಾಗಿದ್ದ 10 ಮಂದಿಯಲ್ಲಿ 9 ಪ್ರಯಾಣಿಕರು ಪತ್ತೆ – ಕಹಳೆ ನ್ಯೂಸ್

ಬೆಂಗಳೂರು: ಓಮಿಕ್ರಾನ್‌ ಪೀಡಿತ ದೇಶ ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಆಗಮಿಸಿದ್ದ 10 ಪ್ರಯಾಣಿಕರ ಪೈಕಿ ಇಂದು 9 ಮಂದಿ ಪತ್ತೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ 66 ವರ್ಷ ವಯಸ್ಸಿನ ವ್ಯಕ್ತಿಗೆ ಓಮಿಕ್ರಾನ್‌ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅದೇ ವಿಮಾನದಲ್ಲಿ 57 ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದ್ದರು. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹಲವರ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ವರದಿ ನೆಗೆಟಿವ್‌ ಬಂದಿದೆ. ಉಳಿದ 10 ಮಂದಿ ಕಾಣೆಯಾಗಿದ್ದರು. ಅವರು ಏರ್‌ಪೋರ್ಟ್‌ನಲ್ಲಿ ನೀಡಿದ್ದ...
ಅಂತಾರಾಷ್ಟ್ರೀಯಸುದ್ದಿ

ಡೆಲ್ಟಾಗಿಂತ ‘ಒಮಿಕ್ರಾನ್’ ಡೇಂಜರಸ್​​..? WHO ನೀಡಿದ 5 ಲೇಟೆಸ್ಟ್​ ಮಾಹಿತಿ ಏನು..? – ಕಹಳೆ ನ್ಯೂಸ್

ನವದೆಹಲಿ: ಕಳೆದ ಒಂದು ವಾರದಿಂದ ಇಡೀ ವಿಶ್ವವನ್ನ ಕೊರೊನಾ ರೂಪಾಂತರಿ B.1.1.529 (ಒಮಿಕ್ರಾನ್) ನಿದ್ದೆಗೆಡಿಸಿದೆ. ಇದುವರೆಗೆ ಒಮಿಕ್ರಾನ್ ವೈರಸ್​ ಬಗ್ಗೆ ಸರಿಯಾದ ಅಧ್ಯಯನಗಳು ಆಗಿಲ್ಲ. ಇದೀಗ WHO ಒಮಿಕ್ರಾನ್​ಗೆ ಸಂಬಂಧಿಸಿದ ಒಂದಿಷ್ಟು ಲೇಟೆಸ್ಟ್​ ಮಾಹಿತಿ ಬಿಡುಗಡೆ ಮಾಡಿದೆ.ಜೊತೆಗೆ ಇದು ಅತ್ಯಂತ ಅಪಾಯಕಾರಿ ತಳಿ, ಹೀಗಾಗಿ ಎಲ್ಲ ದೇಶಗಳೂ ಮುಂಜಾಗೃತ ವಹಿಸಿ ಸಿದ್ಧತೆ ಮಾಡಿಕೊಳ್ಳಬೇಕು ಅನ್ನೋ ಎಚ್ಚರಿಕೆ ಸಂದೇಶ ಕೂಡ ರವಾನಿಸಿದೆ. ಒಮಿಕ್ರಾನ್ ಪತ್ತೆ ಹಚ್ಚಲು PCR ಟೆಸ್ಟ್ ಮುಂದುವರಿಸುವ ಅಗತ್ಯ...
ಅಂತಾರಾಷ್ಟ್ರೀಯಸುದ್ದಿ

ಅಪ್ಘಾನ್ ನಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಮಸೀದಿಯಲ್ಲಿ ಬಾಂಬ್ ಸ್ಪೋಟ ; ಮೂವರ ಸಾವು, 15 ಮಂದಿಗೆ ಗಾಯ – ಕಹಳೆ ನ್ಯೂಸ್

ಕಾಬೂಲ್ , ನ 13 : ಪೂರ್ವ ಅಫ್ಘಾನಿಸ್ಥಾನದ ನಂಗರ್‌ಹಾರ್ ಪ್ರಾಂತ್ಯದ ಸ್ಪಿನ್ ಘರ್ ಪ್ರದೇಶದಲ್ಲಿ ಮಸೀದಿಯೊಂದರಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರದ ಪ್ರಾರ್ಥನೆಯ ವೇಳೆ ಮಧ್ಯಾಹ್ನ 1:30ರ ಸುಮಾರಿಗೆ ಮಸೀದಿಯ ಒಳಭಾಗದಲ್ಲಿದ್ದ ಸ್ಫೋಟಕಗಳು ಸ್ಫೋಟಗೊಂಡಿವೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಇಸ್ಲಾಮಿಕ್ ಸ್ಟೇಟ್ ಗುಂಪಿನ ಚಟುವಟಿಕೆಯ ಕೇಂದ್ರವಾದ...
ಅಂತಾರಾಷ್ಟ್ರೀಯರಾಷ್ಟ್ರೀಯಸುದ್ದಿ

ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ | ಮೆಸೇಜ್ ಹೋಗುತ್ತಿಲ್ಲ, ಬರುತ್ತಿಲ್ಲ.. ರೀಸ್ಟಾರ್ಟ್ ಮಾಡಿ ಮಾಡಿ ರಾತ್ರಿಯಿಡೀ ಪರದಾಡಿದ ಸಾಮಾಜಿಕ ಜಾಲತಾಣ ಪ್ರೀಯರು – ಕಹಳೆ ನ್ಯೂಸ್

ನವದೆಹಲಿ, ಅ. 05 : ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಈ ನಡುವೆ ಉಂಟಾಗಿರುವ ವ್ಯತ್ಯಯಕ್ಕೆ ಫೇಸ್ ಬುಕ್ ಸಂಸ್ಥೆ ಕ್ಷಮೆಯಾಚಿಸಿದೆ. ಇನ್ನು ಉಂಟಾಗಿರುವ ವ್ಯತ್ಯಯದಿಂದಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದ ಕಾರಣ ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಗ್ರಾಹಕರು ಪರದಾಡುವಂತಾಗಿದೆ. ವಾಟ್ಸಾಪ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಡೌನ್‌ಟೆಕ್ಟರ್ ಪ್ರಕಾರ, ಶೇ. 40 ರಷ್ಟು ಬಳಕೆದಾರರಿಗೆ ಆಪ್ ಡೌನ್‌ಲೋಡ್ ಮಾಡಲು...
1 22 23 24 25 26
Page 24 of 26