
ಕುಂದಾಪುರ: ಗಂಗೊಳ್ಳಿ ಬಸ್ ನಿಲ್ದಾಣದ ಸಮೀಪದ ಪಂಚಗoಗಾವಳಿ ನದಿಯ ದಡದಲ್ಲಿ ಜಾನುವಾರು ತಲೆ ಮತ್ತು ಪ್ಲಾಸ್ಟಿಕ್ ಚೀಲದಲ್ಲಿ ಗೋವಿನ ಅವಶೇಷಗಳು ಪತ್ತೆಯಾದ ಘಟನೆ ಭಾನುವಾರ ಸಂಜೆ ವೇಳೆ ವರದಿಯಾಗಿದ್ದು ಸ್ಥಳಕ್ಕೆ ಸರ್ಕಲ್ ಬೈಂದೂರು ಇನ್ಸ್ಪೆಕ್ಟರ್ಹಾಗೂ ಗಂಗೊಳ್ಳಿ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಗಂಗೊಳ್ಳಿ ಭಾಗದಲ್ಲಿ ಹಿಂದಿನಿoದಲೂ ನಿರಂತರವಾಗಿ ಗೋ ಸಾಗಾಟ, ಗೋ ಹತ್ಯೆ ನಡೆಯುತ್ತಿದ್ದು ಇದರಿಂದಾಗಿ ಧಾರ್ಮಿಕ ಭಾವನೆ ಕೆರಳಿಸಲಾಗುತ್ತಿದೆ. ಶಾಂತಿ ಸುವ್ಯವಸ್ಥೆ ಹಾಳು ಮಾಡುವ ದುರುದ್ದೇಶದಿಂದ ಇಂತಹ ಕುಕೃತ್ಯ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಹಿಂಜಾವೇ ಆಗ್ರಹಿಸಿದೆ. ಸ್ಥಳೀಯ ನಿವಾಸಿ ಅನುಪ್ ಗಂಗೊಳ್ಳಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.















