
ಮೂಡುಬಿದಿರೆ: ತುಳು ಸಿನಿಮಾ ಹಾಗೂ ತುಳು ಭಾಷೆ ಗೆ ಪ್ರೋತ್ಸಾಹ, ಬೆಂಬಲ ನೀಡುವುದಕ್ಕಾಗಿ ಜೈನ ಬಸದಿ ಗಳ ಸ್ವಚ್ಚತಾ ತಂಡ ಹಾಗೂ ಮಕ್ಕಿಮನೆ ಕಲಾವೃಂದದ 65 ಕ್ಕಿಂತ ಹೆಚ್ಚು ಸದ್ಯಸರು ಹಾಗೂ ಕಲಾಭಿಮಾನಿಗಳು ಮೂಡುಬಿದಿರೆಯ ಅಮರಶ್ರೀ ಚಿತ್ರಮಂದಿರದಲ್ಲಿ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರ ಸರ್ಕಸ್ ತುಳು ಚಲನಚಿತ್ರವನ್ನು ನೋಡಿ ಸಂಭ್ರಮ ಪಟ್ಟರು.

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್,ಶ್ವೇತಾ ಜೈನ್ ವಕೀಲರು , ಯತಿರಾಜ್, ಮಂಜುಳ ಅಭಯಚಂದ್ರ ಜೈನ್, ಸುದರ್ಶನ್ ಜೈನ್, ವಿತೇಶ್ ಜೈನ್, ಪುಷ್ಪರಾಜ್ ಜೈನ್, ಶ್ವೇತಾ ಪ್ರವೀಣ್ ಜೈನ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಟಿ ಪಂಚಮಿ ಭೋಜರಾಜ್ ವಾಮಂಜೂರು ಅವರನ್ನು ಗೌರವಿಸಲಾಯಿತು , ಸುದೇಶ್ ಜೈನ್ ಮಕ್ಕಿಮನೆ ಜೊತೆಗೆ ಇದ್ದರು









