Saturday, April 25, 2026
ಸುದ್ದಿ

ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ನಕಲಿ ಪತ್ರಕರ್ತ – ಕಹಳೆ ನ್ಯೂಸ್

ಮಂಗಳೂರು: ದಿನೇ ದಿನೇ ಮಾಧ್ಯಮದ ಹೆಸರಲ್ಲಿ ಸುಲಿಗೆ ಮಾಡೋದು ಒಂದಲ್ಲ ಒಂದು ಕಡೆ ಸುದ್ದಿಯಾಗ್ತಾನೆ ಇದೆ. ಇನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಪಟ್ರಮೆ ನಿವಾಸಿ ಸತೀಶ್ ಕನ್ನಡ ಖಾಸಗಿ ಮಾಧ್ಯಮಗಳ ಹೆಸರನ್ನು ಹೇಳಿಕೊಂಡು ಒಂದು ವಾರದಿಂದ ಹಣ ಸುಲಿಗೆ ಮಾಡಿದ್ದಾನೆ.

ತಾಲೂಕಿನ ನೆರಿಯ ಗ್ರಾಮದಲ್ಲಿ ಟಿವಿ ಮಾಧ್ಯಮ ವರದಿಗಾರರ ಹೆಸರಲ್ಲಿ ಮರಳು ಇರುವ ಪ್ರದೇಶಕ್ಕೆ ಹೋಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದು ನಿನ್ನೆ ಸಂಜೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ನಕಲಿ ಪತ್ರಕರ್ತ ಸತೀಶ್ ಧರ್ಮಸ್ಥಳ ಪೊಲೀಸ್‌ರ ಅತಿಥಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು