Friday, March 13, 2026
ಸುದ್ದಿ

ಬೈಕ್ ಹಾಗೂ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣದ ಆರೋಪಿಗೂ ವಿಶ್ವ ಹಿಂದೂ ಪರಿಷತ್‍ಗೂ ಸಂಬಂಧವಿಲ್ಲ’; ವಿ.ಹಿ.ಪ ಭಜರಂಗದಳ ಮಂಗಳೂರು ಸ್ಪಷ್ಟನೆ-ಕಹಳೆ ನ್ಯೂಸ್

ಮಂಗಳೂರು : ಬೈಕ್ ಹಾಗೂ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣದಲ್ಲಿ ಭಾಗಿಯಾದ ಆರೋಪಿ ವಿಶ್ವ ಹಿಂದೂ ಪರಿಷತ್‍ನ ಸಂಚಾಲಕ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ಪ್ರಕರಣದ ಕುರಿತು ವಿಶ್ವ ಹಿಂದು ಪರಿಷತ್ ಬಜರಂಗದಳ ಸ್ಪಷ್ಟೀಕರಣ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಆರೋಪಿ, ಮೊಂಟೆಪದವು ನಿವಾಸಿ ತಾರನಾಥ್ ಮೋಹನ್ ವಿಶ್ವ ಹಿಂದೂ ಪರಿಷತ್‍ನ ಹಿಂದಿನ ಸಂಚಾಲಕ, ಕೆಲವು ತಿಂಗಳ ಹಿಂದೆ ಕೆಲವೊಂದು ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡ ಕಾರಣದಿಂದಾಗಿ ಅವರನ್ನು ಕಳೆದ 6 ತಿಂಗಳ ಹಿಂದೆಯೇ ಸಂಘಟನೆಯ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗಿದೆ. ಆದ್ದರಿಂದ ಆತ ಎಸಗಿದ ಕೃತ್ಯಗಳಿಗೂ ಸಂಘಟನೆಗೂ ಯಾವುದೇ ಸಂಭಂಧವಿರುವುದಿಲ್ಲ. ಉದ್ದೇಶ ಪೂರ್ವಕವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಘಟನೆಯ ಹೆಸರನ್ನು ಕೆಡಿಸುವ ಸಲುವಾಗಿ ಸಂದೇಶ ರವಾನೆಯಾಗುತ್ತಿದೆ.ಮುಂದಕ್ಕೆ ಈ ಸಂದೇಶ ರವಾನೆಯಾದಲ್ಲಿ ಪೋಲೀಸ್ ಇಲಾಖೆ ಮುಖಾಂತರ ಅಂತಹ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದೆ.