Wednesday, May 22, 2024
ಗೋಕರ್ಣರಾಷ್ಟ್ರೀಯಸುದ್ದಿ

Breaking News : ಕೇಂದ್ರ ಸಚಿವ ಶ್ರೀ ಪಾದ್ ನಾಯಕ್ ಕಾರು ಅಂಕೋಲದಲ್ಲಿ ಅಪಘಾತ : ಸಚಿವರ ಪತ್ನಿ, ಪಿ ಎ ದುರ್ಮರಣ ಸಚಿವರ ಸ್ಥಿತಿ ಗಂಭೀರ – ಕಹಳೆ ನ್ಯೂಸ್

ಕಾರವಾರ, ಜ 11 : ಕೇಂದ್ರ ಸಚಿವರ ಕಾರು ಅಪಘಾತವಾಗಿ ಸಚಿವರ ಪತ್ನಿ ಮೃತಪಟ್ಟು, ಸಚಿವರ ಸಹಿತ ಮೂವರು ಗಾಯಗೊಂಡ ಘಟನರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸಮೀಪ ನಡೆದಿದೆ. ಕೇಂದ್ರ ಆಯುಷ್ ಖಾತೆ ಸಚಿವ ಶ್ರೀ ಪಾದ್ ನಾಯಕ್ ರವರ ಪತ್ನಿ ವಿಜಯಾ ಹಾಗೂ ಸಚಿವರ ಪಿ ಎ ದೀಪಕ್ ರಾಮದಾದ ಮೃತ ದುರ್ದೈವಿಗಳು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಪಾದ ನಾಯಕ್ ದಂಪತಿ ಯಲ್ಲಾಪುರ ಮಾರ್ಗವಾಗಿ ಗೋಕರ್ಣಕ್ಕೆ ಹೋಗುತ್ತಿದ್ದ ಹೊಸಕಂಬಿ‌ ಘಾಟ್ ನತ್ತ ಬರುತ್ತಿದ್ದಂತೆ ಕಾರು ನಿಯಂತ್ರಣ ‌ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿದ್ದ ಉಳಿದ ಮೂವರಿಗೆ ಗಂಭೀರವಾದ ಗಾಯಗೊಂಡಿದ್ದಾರೆ. ಇದೀಗ ಅವರನ್ನು ಅಂಕೋಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು

ಜ.9 ರಂದು ದಂಪತಿ ಸಮೇತರಾಗಿ ಸಚಿವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಜಾಹೀರಾತು