
ಇವಿಎಂ ಮಿಷನ್ ಬಗ್ಗೆ ಜನರಲ್ಲಿ ಸಂಶಯ ಮೂಡಿದ್ದು, ಲೋಕಸಭೆ ಚುನಾವಣೆ ಬಳಿಕ ಜನ ಸಾಮಾನ್ಯರಲ್ಲಿ ಇವಿಎಂ ಬಗ್ಗೆ ಗೊಂದಲ ಉಂಟಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕಾಗಿದ್ದು, ಮುಂದಿನ ದಿನಗಳಲ್ಲಿ ಇವಿಎಂ ಕೈಬಿಟ್ಟು ಬ್ಯಾಲೇಟ್ ಓಟ್ಟಿಗೆ ಮನವಿ ಮಾಡಲಿದ್ದಾರೆ. ಜನರಿಗೆ ನಂಬಿಕೆ ಇಲ್ಲದ ಇವಿಎಂ ಬಳಕೆಯನ್ನು ಆಯೋಗ ಕೈಬಿಡಬೇಕಾಗಿದೆ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿಕೆ ನೀಡಿದ್ದಾರೆ.









