Tuesday, April 28, 2026
ಸುದ್ದಿ

ಆರೋಪಿಯನ್ನು ಹಿಡಿಯಲು ಹೊರಟ್ಟಿದ್ದ ಪೊಲೀಸ್​ ಜೀಪ್​ಗೆ ಸೂಟ್ಕರ್​​ ಡಿಕ್ಕಿ : ಮಹಿಳೆ ಸ್ಥಳದಲ್ಲಿಯೇ ಸಾವು – ಕಹಳೆ ನ್ಯೂಸ್

ಹಾವೇರಿ: ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಿಡಿಯಲು ಹೊರಟ್ಟಿದ್ದ ಪೊಲೀಸ್​ ಜೀಪ್​ಗೆ ಸೂಟ್ಕರ್​​ ಡಿಕ್ಕಿಯಾದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಣಿಬೆನ್ನೂರು ಮಾಗೋಡ ರಸ್ತೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮದ ಸವಿತಾ ಶಶಿಮಠ (24) ಮೃತ ದುರ್ದೈವಿ. ರಾಣಿ ಬೆನ್ನೂರು ಗ್ರಾಮೀಣ ಠಾಣೆ ಪಿಎಸ್​ಐ ಸುನೀಲ್​ ಕುಮಾರ ಪ್ರಯಾಣಿಸುತ್ತಿದ್ದ ಜೀಪ್​​ಗೆ ಸ್ಕೂಟರ್​​ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಸ್ಕೂಟರ್​ ಹಿಂಬದಿಯಲ್ಲಿ ಕುಳಿತಿದ್ದ ಕವಿತಾ ಕೊದಾರಿ (27) ಅವರು ಗಾಯಗೊಂಡಿದ್ದಾರೆ. ಗಾಯಾಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು