
ಬೆಂಗಳೂರು: ಹೈಕೋರ್ಟ್ನ ಆದೇಶದಂತೆ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆಗಳನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ಸೇಫ್ ಆಗಿ ಪಾಕಿಸ್ಥಾನಕ್ಕೆ ತಲುಪಿಸಿದ್ದಾರೆ. ಶಂಶುದ್ದೀನ್ ಹಾಗೂ ಕಿರಣ್ ಗುಲಮ್ ಅಕ್ರಮವಾಗಿ ಪಾಕಿಸ್ತಾನದಿಂದ ನೇಪಾಳ, ಅಲ್ಲಿಂದ ಭಾರತಕ್ಕೆ ಬಂದು ಕೊನೆಗೆ ನಗರದ ಕುಮಾರಸ್ವಾಮಿ ಲೇಔಟ್ನಲ್ಲಿ ವಾಸವಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ, 2017ರ ಮೇ ತಿಂಗಳಲ್ಲಿ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.
ಈ ಆರೋಪಿಗಳ ವಿರುದ್ಧ 420ಬಿ, 465,468 ಸೆಕ್ಷನ್ಗಳು ದಾಖಲಾಗಿದ್ದವು. ಈ ಹಿನ್ನೆಲೆ ಅವರು 2.5 ವರ್ಷ ಜೈಲಿನಲ್ಲಿ ಸಜೆಯನ್ನೂ ಅನುಭವಿಸಿದ್ದರು. ಬಳಿಕ ಹೈಕೋರ್ಟ್, ಅವರನ್ನು ಪಾಕಿಸ್ತಾನಕ್ಕೆ ವಾಪಾಸ್ ಕಳುಹಿಸುವಂತೆ ಆದೇಶಿಸಿತ್ತು. ಹೀಗಾಗಿ ಕುಮಾರಸ್ವಾಮಿ ಲೇಔಟ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಅವರನ್ನು ಸೇಫಾಗಿ ವಾಘಾ ಬಾರ್ಡರ್ಗೆ ಕಳುಹಿಸಿಕೊಟ್ಟಿದ್ದಾರೆ.















