ಜಿಎಸ್ಟಿ ಹಾಗೂ ನೋಟ್ಬ್ಯಾನ್ ಮಾಡುವ ಮೊದಲು ಪ್ರಧಾನಿ ಮೋದಿ, ಮನಮೋಹನ್ ಸಿಂಗ್ ಸಲಹೆ ಪಡೆದಿದ್ದರೆ ಅರ್ಥವ್ಯವಸ್ಥೆ ಹಾಳಾಗುತ್ತಿರಲಿಲ್ಲ: ರಾಹುಲ್ ಗಾಂಧಿ – ಕಹಳೆ ನ್ಯೂಸ್

ಚಂಡೀಗಢ: ಜಿಎಸ್ಟಿ ಹಾಗೂ ನೋಟ್ಬ್ಯಾನ್ ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಸಲಹೆ ಪಡೆದುಕೊಂಡಿದ್ದರೆ ಅರ್ಥವ್ಯವಸ್ಥೆ ಹಾಳಾಗುತ್ತಿರಲಿಲ್ಲ ಅಂತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ನ ಬರ್ಗಾರಿಯಲ್ಲಿ ಕಿಡಿಕಾರಿದ ರಾಹುಲ್ ಗಾಂಧಿ, ಗಬ್ಬರ್ಸಿಂಗ್ ಟ್ಯಾಕ್ಸ್ (ಜಿಎಸ್ಟಿ) ಹಾಗೂ ನೋಟ್ಬ್ಯಾನ್ನಿಂದಾಗಿ ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದೆ. ನೋಟ್ಬ್ಯಾನ್ನಿಂದಾಗಿ ದೇಶದ ಜಿಡಿಪಿ 2% ಕೆಳಗಿಳಿಯುತ್ತೆ ಅಂತಾ ಮನಮೋಹನ್ ಸಿಂಗ್ ಅಂದು ಸರಿಯಾಗಿಯೇ ಭವಿಷ್ಯ ನುಡಿದಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 2014ರ ಚುನಾವಣೆಗೂ ಮೊದಲು ಮನಮೋಹನ್ ಸಿಂಗ್ ಅವರ ಮೇಲೆ ಮೋದಿ ಜೋಕ್ ಮಾಡುತ್ತಿದ್ದರು. ಈಗ ಮೋದಿ, ಸಿಂಗ್ ಅವರ ಮೇಲೆ ಜೋಕ್ ಮಾಡುತ್ತಿಲ್ಲ. ಯಾಕಂದ್ರೆ ಇಡೀ ದೇಶವೇ ಈಗ ಮೋದಿ ಮೇಲೆ ಜೋಕ್ ಮಾಡುತ್ತಿದೆ.









