
ಬೆಳ್ತಂಗಡಿ: ಮುಂಡಾಜೆ ಗ್ರಾಮದ ಶೃತಿ ಶೆಟ್ಟಿ ಎಂಬುವವರು ಟ್ರಂಬೊಸೈಟೋಫೆನಿಯಾ ಎಂಬ ರೋಗದಿಂದ ಬಳಲುತ್ತಿದ್ದಾರೆ. ಇವರ ಕುಟುಂಬವು ಬಹಳ ಬಡತನದಲ್ಲಿದ್ದು ಔಷಧಿಗೂ ಹಣ ಹೊಂದಿಸಲು ಕಷ್ಟ ಪಡುತ್ತಿದ್ದಾರೆ.
ಇದ್ದನ್ನು ಕಂಡ ಸ್ಥಳೀಯ ರಾಜಕೇಸರಿ ತಂಡದ ಸದಸ್ಯರು ಸಣ್ಣ ನೀರಿನ ಬಾಟಲ್ಗಳನ್ನು ಮಾರಿ ಅದರಿಂದ ಬಂದ ಹಣವನ್ನು ಶೃತಿ ಅವರ ಔಷಧಿಯ ಖರ್ಚಿಗೆ ನೀಡುತ್ತಿದ್ದಾರೆ. ಇವರ ಈ ಸಾಹಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.














