
ಹತ್ತಾರು ಆನೆಗಳ ಹಿಂಡನ್ನ ಕಂಡು ಮುತ್ತೋಡಿ ಪ್ರವಾಸಿಗರು ಫುಲ್ ಕುಶ್ ಆಗಿದ್ದಾರೆ, ಚಿಕ್ಕಮಗಳೂರು ಜಿಲ್ಲೆ ಭದ್ರಾ ಅಭಯಾರಣ್ಯ ವ್ಯಾಪ್ತಿಯ, ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಹಲವಾರು ತಿಂಗಳ ಹಿಂದೆ ಆನೆಗಳ ಸಂಖ್ಯೆ ಕಡಿಮೆಯಾಗಿತ್ತು, ಆದ್ರೆ ಕೆಲದಿನಗಳಿಂದ ಆನೆಗಳು ಗುಂಪು ಗುಂಪಾಗಿ ಪ್ರತ್ಯಕ್ಷವಾಗಿವೆ.
ಆನೆಗಳ ಜೊತೆಗೆ ಕಾಡೆಮ್ಮೆಯು ಇದ್ದು ಸಫಾರಿಗೆ ತೆರಳಿದ ಛಾಯಾಗ್ರಾಹಕ ಶಿವಕುಮಾರ್ ಕ್ಯಾಮಾರಾದಲ್ಲಿ ಈ ಗಜಪಡೆ ಸೆರೆಯಾಗಿದೆ.
ಗಜಪಡೆಯ ಗಾಂಭೀರ್ಯವನ್ನು ಕಂಡು ಪ್ರವಾಸಿಗರು ಖುಷಿಯಾಗಿದ್ದಾರೆ. ಇನ್ನು ಇತ್ತೀಚೆಗೆ ಆನೆಗಳ ಸಂಖ್ಯೆ ಹೆಚ್ಚಳವಾದ ಬಗ್ಗೆ ಅರಣ್ಯ ಇಲಾಖೆ ಮಾಹಿತಿನೀಡಿದೆ.














