
ಬಂಟ್ವಾಳ : ಪೂರ್ವ ನಿಗದಿಯಂತೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಶಾಸಕ ರಾಜೇಶ್ ನಾೈಕ್ ಆಗಮಿಸಿದ್ದರು. ಇವರು ಆಗಮನದಿಂದ ಕೋಪಗೊಂಡ ಮಾಜಿ ಶಾಸಕ ರಮಾನಾಥ ರೈ ಬಂಟರು ಪುಂಡಾಟಿಕೆ ಮೆರೆದಿದ್ದಾರೆ.

ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲೇ ಇದ್ದರೂ ಕೂಡ ಕೈ ಕಟ್ಟಿಕುಳಿತ್ತಿದ್ದಾರೆ. ಗೂಂಡಾಗಿರಿ ಪ್ರವ್ರತ್ತಿಯಿಂದ ಸರಕಾರಿ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ. ಜಿ.ಪಂ.ಸದಸ್ಯ ಹಾಗೂ ಅವರ ಬೆಂಬಲಿಗರ ಮೇಲೆ ಪೋಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಸಂಸದ ನಳಿನ್ ಕುಮಾರ್ ಕಟೀಲು ಕಿಡಿಕಾರಿದ್ದಾರೆ.














