ಕಾಪುವಿನ ಪ್ರಜಾಸೌಧ ಆವರಣದಲ್ಲಿ ಉದ್ಯಾನ: ಸಾರ್ವಜನಿಕರ ಸಹಕಾರವೂ ಅಗತ್ಯ – ತಹಶೀಲ್ದಾರ್ ಪ್ರತಿಭಾ ಆರ್ -ಕಹಳೆ ನ್ಯೂಸ್

ಕಾಪು (ಪಡುಬಿದ್ರಿ): ಕಾಪುವಿನ ಪ್ರಜಾಸೌಧದ ಆವರಣದಲ್ಲಿ ಉದ್ಯಾನ ನಿರ್ಮಿಸಲಾಗುವುದು. ಅದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ತಹಶೀಲ್ದಾರ್ ಪ್ರತಿಭಾ ಆರ್. ತಿಳಿಸಿದರು.
ಕಾಪು ತಾಲ್ಲೂಕು ಆಡಳಿತದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ಅವರು ಮಾತನಾಡಿದರು.
ಸಾರ್ವಜನಿಕರಿಗೆ ಶಿಕ್ಷಣ ನೀಡುವುದರ ಜತೆಗೆ ಗಣನೀಯ ನೀತಿ, ಸುಧಾರಣೆಗಳನ್ನು ಜಾರಿಗೆ ತರಲು ಪರಿಸರ ದಿನಾಚರಣೆಯು ಪ್ರೋತ್ಸಾಹಿಸುತ್ತದೆ. ಸ್ವಚ್ಛತಾ ಕಾರ್ಯಕ್ರಮ, ನೆಡುತೋಪು, ಜಾಗೃತಿ ಅಭಿಯಾನ, ಶಾಲಾ ಕಾರ್ಯಕ್ರಮ ಮತ್ತು ಪರಿಸರಕ್ಕೆ ಪ್ರಯೋಜನಕಾರಿ ಬದ್ಧತೆಗಳನ್ನು ಪ್ರೋತ್ಸಾಹಿಸುತ್ತದೆ ಎಂದರು.
ಉಪ ತಹಶೀಲ್ದಾರ್ ರವಿಕಿರಣ್, ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಸಿಬ್ಬಂದಿ ಭಾಗವಹಿಸಿದ್ದರು.














