ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶತರುದ್ರ ಪಾರಾಯಣ – ಕಹಳೆ ನ್ಯೂಸ್

ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೇದ ಸಂವರ್ಧನ ಪ್ರತಿಷ್ಠಾನ, ಪುತ್ತೂರು ಇದರ ವತಿಯಿಂದ ಗಡಿ ಕಾಯುವ ಧೀರ ವೀರ ಸೈನಿಕರಿಗೆ ರಕ್ಷಾ ಕವಚ ಕ್ಕಾಗಿ ವಿಶೇಷ ಶತರುದ್ರ ಪಾರಾಯಣ ನಡೆಯಿತು.
ಕಾರ್ಯಕ್ರಮವನ್ನು ದೇವಸ್ಥಾನದ ಅಧ್ಯಕ್ಷ ಶ್ರೀ ಪಂಜಿಗುಡ್ಡ ಈಶ್ವರ ಭಟ್ ಮತ್ತು ಭೂ ಸೇನೆಯ ಹಿರಿಯ ನಿವೃತ್ತ ಅಧಿಕಾರಿ ಶ್ರೀ ಕರ್ನಲ್ ಜಿ ಡಿ ಭಟ್ ದೀಪ ಬೆಳಗಿ ಉದ್ಘಾಟಿಸಿದರು.









