Recent Posts

Saturday, April 25, 2026
ಕ್ರೈಮ್ಬೆಂಗಳೂರುರಾಜ್ಯಸಿನಿಮಾಸುದ್ದಿ

ಜೈಲಲ್ಲಿ ರಾಜಾತಿಥ್ಯ ಬಗ್ಗೆ 3 ಎಫ್‌ಐಆರ್ ದಾಖಲು : 2 ಕೇಸ್ ನಲ್ಲಿ ದರ್ಶನ್ ಎ1 ಆರೋಪಿ – ಕಹಳೆ ನ್ಯೂಸ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಎಫ್‌ಐಆರ್ ಗಳನ್ನು ದಾಖಲಿಸಲಾಗಿದೆ.

ಈ ಮೂರು ಪ್ರಕರಣಗಳ ಪೈಕಿ 2 ಕೇಸ್ ನಲ್ಲಿ ನಟ ದರ್ಶನ್ ಎ 1 ಆರೋಪಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲನೇ ಪ್ರಕರಣದಲ್ಲಿ ದರ್ಶನ್ ಎ1, ನಾಗರಾಜ್ ಎ2, ವಿಲ್ಸನ್ ಗಾರ್ಡನ್ ನಾಗ ಎ3, ಕುಳ್ಳ ಸೀನ ಎ4 ಆರೋಪಿಗಳಾಗಿದ್ದಾರೆ.

ಎರಡನೇ ಪ್ರಕರಣದಲ್ಲಿ ನಟ ದರ್ಶನ್ ಎ1, ಧರ್ಮ ಎ2, ಸತ್ಯ ಎ3 ಆರೋಪಿಗಳಾಗಿದ್ದಾರೆ. ಮೂರನೇ ಪ್ರಕರಣದಲ್ಲಿ ಕೆ.ಎಸ್. ಸುದರ್ಶನ್ ಎ1, ಮುಜೀಬ್ ಎ2, ಪರಮೇಶ್ ನಾಯಕ ಲಮಾಣಿ ಎ3, ಕೆ.ಬಿ. ರಾಯಮನೆ ಎ4 ಆರೋಪಿಗಳಾಗಿದ್ದಾರೆ.

ಕೇಂದ್ರ ಕಾರಾಗೃಹಗಳ ಉಪ ನಿರ್ದೇಶಕ ಸೋಮಶೇಖರ ಅವರ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.