Recent Posts

Saturday, April 25, 2026
ಸುದ್ದಿ

Breaking News : ರಾಜ್ಯಕ್ಕೆ ಹಿಂಗಾರು ಮಳೆ ಎಂಟ್ರಿ ; ವರ್ಷಧಾರೆ ಅಬ್ಬರ ಶುರು – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯಕ್ಕೆ ಹಿಂಗಾರು ಮಳೆ ಎಂಟ್ರಿಯಾಗಿದ್ದು ಇಂದಿನಿಂದ ರಾಜ್ಯದಲ್ಲಿ ವರ್ಷಧಾರೆಯ ಅಬ್ಬರ ಶುರುವಾಗಲಿದೆ.

ಅಕ್ಟೋಬರ್ ಎರಡನೇ ವಾರವೇ ಬರಬೇಕಾಗಿದ್ದ, ಈಶಾನ್ಯ ಮುಂಗಾರು ಈ ವರ್ಷ ವಿಳಂಬವಾಗಿದೆ. ಚೆನ್ನೈನಲ್ಲಿ ಈಗಾಗಲೇ ವರುಣನ ಅಬ್ಬರ ಶುರುವಾಗಲಿದ್ದು, ರಾಜ್ಯದಲ್ಲಿ ನವೆಂಬರ್ ಮೂರು ಹಾಗೂ ನಾಲ್ಕರವರೆಗೂ ಮಳೆ ಇರಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಿನಲ್ಲಿ ತುಸು ಹೆಚ್ಚೆ ಅನಿಸುವಷ್ಟು ಮಳೆ ಇರಲಿದೆ. ಬೆಂಗಳೂರಿನಲ್ಲೂ ಮೇಘಸ್ಫೋಟದ ಅಬ್ಬರ ಇರಲಿದೆ. ಈಶಾನ್ಯ ಮಾರುತದ ಆಗಮನದ ವಿಳಂಬದಿಂದ ಬೆಳೆಗಳಿಗೆ ನೀರಿಲ್ಲದೇ ಒದ್ದಾಡುತ್ತಿದ್ದ ರೈತರಿಗೆ ಕೊಂಚ ಸಂತಸ ಮೂಡುವಂತಾಗಿದೆ.