Thursday, March 12, 2026

archiveWoman

ಸುದ್ದಿ

ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಎಬಿವಿಪಿಯಿಂದ ಮಹಿಳಾ ಸುರಕ್ಷಾ, ಆತ್ಮರಕ್ಷಣಾ ತರಬೇತಿ – ಕಹಳೆ ನ್ಯೂಸ್

ಪುತ್ತೂರು: ಸೌಂದರ್ಯವೆಂಬುದು ಮಹಿಳೆಯ ಬಾಹ್ಯ ನೋಟಕ್ಕೆ ಸಂಬಂಧಿಸಿದ್ದಲ್ಲ. ಮಹಿಳೆಯು ಸಾಧನೆಯ ಶಿಖರವೇರಿದಾಗ ದೇಶವನ್ನು ಪ್ರತಿನಿಧಿಸುವುದರ ಮೂಲಕ ಬರುವ ಆನಂದ ಬಾಷ್ಪವೇ ನಿಜವಾದ ಸೌಂದರ್ಯ. ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು. ತೊಟ್ಟಿಲನ್ನು ತೂಗುವ ಕೈ ದೇಶವನ್ನು ಆಳಬಲ್ಲದು. ಚರಿತ್ರೆಯ ಪುಟವನ್ನು ನೋಡಿದಾಗ ರಾಣಿಅಬ್ಬಕ್ಕ, ಕೆಳದಿ ಚೆನ್ನಮ್ಮ, ಹೀಗೆ ಹತ್ತು ಹಲವು ವೀರ ಮಹಿಳೆಯರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದ್ದಾರೆ. ಅಂತಹ ಮಹಿಳೆಯರು ಮರಣಹೊಂದಿದ್ದರೂ, ಚರಿತ್ರೆಯ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ...