ಶಬರಿಮಲೆ ವಿವಾದ: ಪ್ರತಿಭಟನೆ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಟೀಕೆ – ಕಹಳೆ ನ್ಯೂಸ್
ನವದೆಹಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಲಪಂಥೀಯ ಹಿಂದು ಸಂಘಟನೆಗಳ ವಿರುದ್ಧ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದು, ತ್ರಿವಳಿ ತಲಾಕ್ ಅನ್ನು ಸ್ವಾಗತಿಸಿದ್ದ ಬಹುತೇಕರು ಇಂದು ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶದ ತೀರ್ಪಿನ ಬಳಿಕ ಬೀದಿಗಿಳಿದಿದ್ದಾರೆ ಎಂದು ಟೀಕಿಸಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡಿದೆ. ಆದರೆ, ನೀವೆಲ್ಲರೂ ಇದು ನಮ್ಮ ಸಂಪ್ರದಾಯ ಎನ್ನುತ್ತಿದ್ದೀರಿ. ತ್ರಿವಳಿ ತಲಾಕ್ ಕೂಡ ಅವರ ಸಂಪ್ರದಾಯವೇ ಆಗಿತ್ತಲ್ಲವೆ? ಅದನ್ನು ರದ್ದುಗೊಳಿಸಿದಾಗ ಎಲ್ಲರೂ...
