Friday, March 13, 2026

archivekahale news

ರಾಜಕೀಯ

ಬಿಜೆಪಿ ಚಾರ್ಜ್‌ಶೀಟ್‌ ಪ್ರಮಾದ ; ಮಾನನಷ್ಟ ದಾವೆ ಹೂಡುವೆ – ಪ್ರತಿಭಾ ಕುಳಾಯಿ

ಮಂಗಳೂರು: ಕಾಂಗ್ರೆಸ್‌ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿದ ಚಾರ್ಜ್‌ ಶೀಟ್‌ನಲ್ಲಿ ತನ್ನ ಫೋಟೊ ಮತ್ತು ಹೆಸರು ಬಳಕೆ ಮಾಡಿದ್ದನ್ನು ಆಕ್ಷೇಪಿಸಿ ಮಂಗಳೂರು ಮನಪಾ ಕಾರ್ಪೊರೇಟರ್‌ ಕಾಂಗ್ರೆಸ್‌ನ ಪ್ರತಿಭಾ ಕುಳಾಯಿ ಅವರು ಕೇಂದ್ರ ಕಾನೂನು ಸಚಿವರ ವಿರುದ್ಧ ಇಲ್ಲಿನ ಸಿವಿಲ್‌ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ.  ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರ ವಿರುದ್ಧ ಮಾನನಷ್ಟ...
ಸುದ್ದಿ

Big News : ಕೈರಂಗಳ ಗೋಕಳ್ಳತನ ಪ್ರಕರಣ ; ಇಬ್ಬರು ಆರೋಪಿಗಳನ್ನು ಹೆಡೆಮುರಿಕಟ್ಟಿದ ಪೋಲಿಸರು! – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರಾ ಗೋಶಾಲೆಯಿಂದ ಗೋವು ಕಳವಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವರ್ಕಾಡಿ ಗ್ರಾಮದ ಮೋನಚ್ಚ ಯಾನೆ ಅಹಮ್ಮದ್‌ ಕುಂಞಿ ಮತ್ತು ಮೊಂಟೆಪದವು ಮರಿಕಳ ಬಶೀರ್‌ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮಾ. 29ರಂದು ಅಮೃತಧಾರಾ ಗೋಶಾಲೆಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳು ಗೇಟಿಗೆ ಹಾಕಿದ್ದ...
ಸುದ್ದಿ

ಇವನರ್ವ, ಇವನರ್ವ ಎಂದು ಡೈಲಾಗ್ ಹೇಳಿದ್ದಕ್ಕೆ ಯಕ್ಷಗಾನ ಹಾಸ್ಯ ಕಲಾವಿದ ಅಮಾನತು! – ಕಹಳೆ ನ್ಯೂಸ್

ಮಂಗಳೂರು: ಯಕ್ಷಗಾನದಲ್ಲಿ ರಾಜಕೀಯ ಪ್ರೇರಿತ ಪದವನ್ನು ಬಳಕೆ ಮಾಡಿದ್ದಕ್ಕೆ ಕಟೀಲು ಮೇಳದ ಹಾಸ್ಯ ಕಲಾವಿದರು ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ. ಏಪ್ರಿಲ್ 1 ರಂದು ಪಡುಮರ್ನಾಡ್ ಬಳಿಯ ಬನ್ನಡ್ಕ ಎಂಬಲ್ಲಿ ನಡೆದಿದೆ ಎನ್ನಲಾದ ಯಕ್ಷಗಾನ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್ಯ ಪ್ರಸಂಗದ ಒಂದು ಸನ್ನಿವೇಶದಲ್ಲಿ “ಇವನರ್ವ, ಇವನರ್ವ” ಎಂದು ಡೈಲಾಗ್ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಚುನಾವಣಾ ಆಯೋಗದ ಕಚೇರಿಯಿಂದ...
ರಾಜಕೀಯ

ಗೋಕಳ್ಳರ ತಕ್ಷಣವೇ ಬಂಧಿಸಿ – ಸುಳ್ಯ ಬಿಜೆಪಿ ಒತ್ತಾಯ

ಸುಳ್ಯ: ಕೈರಂಗಳ ಪುಣ್ಯಕೋಟಿ ನಗರದ ಗೋಶಾಲೆಯಲ್ಲಿ ನಡೆದ ಗೋಕಳ್ಳರ ತಕ್ಷಣವೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಬಿಜೆಪಿ ಒತ್ತಾಯಿಸುತ್ತದೆ ಎಂದು ಸುಳ್ಯ ಬಿಜೆಪಿ ಮಾಧ್ಯಮ ಪ್ರಮುಖ್ ಮುಳಿಯ ಕೇಶವ ಭಟ್ ತಿಳಿಸಿದ್ದಾರೆ. ಗೋಕಳ್ಳರು ಬೆಳಗಿನ ಜಾವ ಮಾರಕ ಆಯುಧಗಳೊಂದಿಗೆ ಗೋಶಾಲೆಗೆ ನುಗ್ಗಿ ಗೋವನ್ನು ಕಳವು ಮಾಡಿರುವುದೂ ಅಲ್ಲದೆ ಈ ಪರಿಸರದಲ್ಲಿ ಭಯದ ವಾತಾವರಣ ಸೃಷ್ಠಿ ಮಾಡಿರುವುದು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಕಳೆದ 3 ದಿನಗಳಿಂದ...
ಸುದ್ದಿ

ಬಯಲು ಸೀಮೆಯಲ್ಲಿ ಬಂಟ್ವಾಳದ ಯುವತಿ ಭವ್ಯಾರಾಣಿ ಸಾಧನೆ ! – ಕಹಳೆ ನ್ಯೂಸ್

ಮಂಗಳೂರು: ತುಮಕೂರಿನ ಶೆಟ್ಟಿಗೊಂಡನ ಹಳ್ಳಿಯ ಗೆಳತಿಯ ಮನೆಗೆ ತೆರಳಿದ ದಕ್ಷಿಣ ಕನ್ನಡ ಮೂಲದ ಯುವತಿಯೊಬ್ಬರಿಗೆ ಅಲ್ಲಿ ಶೌಚಾಲಯ ಇಲ್ಲದಿದ್ದುದರಿಂದ ಒಂದು ದಿನದ ಮಟ್ಟಿಗೆ ಮುಜುಗರ ಉಂಟಾಯಿತು. ಆದರೆ ಅದೇ ಮುಜುಗರವನ್ನು ಹಳ್ಳಿಯ ಜನರು ದಿನವೂ ಅನುಭವಿಸುತ್ತಾರಲ್ಲ ಎಂಬ ಸಹಾನುಭೂತಿಯ ಚಿಂತನೆ ಮೊಳಕೆಯೊಡೆಯಲು ಅಂದಿನ ಅನುಭವ ಕಾರಣವಾಯಿತು. ಮಾತ್ರವಲ್ಲ, ಅದೇ ಚಿಂತನೆ ಮೊದಲಿಗೆ ಆ ಹಳ್ಳಿಯಲ್ಲಿ, ಬಳಿಕ ರಾಜ್ಯವ್ಯಾಪಿಯಾಗಿ ನೂರಾರು ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಡುವುದಕ್ಕೆ  ಕಾರಣ ವಾಗಿ ಸ್ವತ್ಛಕ್ರಾಂತಿಗೆ ಪ್ರೇರಣೆ ನೀಡಿತು. ಕಳೆದ...
ಸುದ್ದಿ

ಕೈರಂಗಳ ಗೋ ಶಾಲೆಯಿಂದ ಹಸುಗಳನ್ನು ಕದ್ದೊಯ್ದ ಪ್ರಕರಣ ; ಆರೋಪಿಗಳನ್ನು ಎರಡು ದಿನಗಳೊಳಗೆ ಬಂಧಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಎಚ್ಚರಿಕೆ – ಹಿಂಜಾವೇ

ಪುತ್ತೂರು: ಕೈರಂಗಳ ಪುಣ್ಯ ಕೋಟಿನಗರದ ಅಮೃತಧಾರ ಗೋ ಶಾಲೆಯಿಂದ ಹಸುಗಳನ್ನು ದರೋಡೆ ಮಾಡಿದ ಆರೋಪಿಗಳನ್ನು ಇನ್ನೆರಡು ದಿವಸಗಳೊಳಗೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯಾದ್ಯಂತ ಸಂವಿಧಾನಾತ್ಮಕವಾಗಿ ನೂರಾರು ಕಡೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಗೋ ಕಳವು ನಿರಂತರವಾಗಿ ನಡೆಯುತ್ತಿದೆ. ಆರಂಭದ ಹಂತದಲ್ಲಿ ಮೇವಿಗೆ ಗುಡ್ಡಕ್ಕೆ ಬಿಟ್ಟ ಗೋವನ್ನು ಕದಿಯುತ್ತಿದ್ದ ಗೋ ಕಳ್ಳರು ಹಿತ್ತಲಲ್ಲಿ ಕಟ್ಟಿದ ಗೋವನ್ನು...
ವಾಣಿಜ್ಯ

ಆಸಕ್ತಿಯುಳ್ಳ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ 3 ದಿನಗಳ ಕಾರ್ಯಾಗಾರ ! – ಕಹಳೆ ನ್ಯೂಸ್

ಪುತ್ತೂರು : ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಆಗರವಾಗಿರುವ ಪ್ರಗತಿ ಎಜ್ಯುಕೇಶನ್ ಫೌಂಡೇಶನ್(ರಿ). ಪುತ್ತೂರು ವತಿಯಿಂದ ಶಿಕ್ಷಕ/ಉಪನ್ಯಾಸಕರಿಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮೂರು ದಿನಗಳ ಕಾರ್ಯಗಾರ ‘TEACHER- the index of forefinger’ ಎ.8 ರಿಂದ ಎ.10ರವರೆಗೆ ಪುತ್ತೂರಿನ ಹೃದಯಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಜರುಗಲಿದೆ. ಬೆಳಗ್ಗೆ 9.30 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಅಪರಾಹ್ನ 1.00 ಗಂಟೆಗೆ ಮುಕ್ತಾಯಗೊಳ್ಳಲಿದೆ. ಎ. 08ರಂದು ಖ್ಯಾತ ಸಾಹಿತಿ ಗಿರಿಮನೆ ಶ್ಯಾಮರಾವ್...
ಕ್ರೀಡೆ

ಮತ್ತೆ ಟ್ವಿಟ್ಟರ್‌ನಲ್ಲಿ ಭಾರತವನ್ನು ಕೆಣಕಿದ ಅಫ್ರಿದಿ – ಕಹಳೆ ನ್ಯೂಸ್

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತೊಮ್ಮೆ ಕಾಶ್ಮೀರ ಸಮಸ್ಯೆಗೆ ಕುರಿತು ಟ್ವೀಟ್ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಕರೆಯುವ ಮೂಲಕ ಅಫ್ರಿದಿ ಉದ್ಧಟತನ ತೋರಿದ್ದಾರೆ. ಭಾರತ ಆಕ್ರಮಿತ ಕಾಶ್ಮೀರದಲ್ಲಿ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದ್ದು, ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಅಲ್ಲಿನ ಮುಕ್ತ ಧ್ವನಿ ಹಾಗೂ ಸ್ವಾತಂತ್ರ್ಯ ಮನೋಭವ ಹೊಂದಿರುವ ಮುಗ್ಧರನ್ನು ಹತ್ಯೆ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ವಿಶ್ವಸಂಸ್ಥೆ ಮತ್ತು ಆದರ...
1 1,445 1,446 1,447 1,448 1,449 1,459
Page 1447 of 1459