Saturday, March 7, 2026

ಯಕ್ಷಗಾನ / ಕಲೆ

ಯಕ್ಷಗಾನ / ಕಲೆ

ನಾಳೆಯೇ ಹಸೆಮಣೆ ಏರಲಿರುವ ತೆಂಕುತಿಟ್ಟಿನ‌ ಖ್ಯಾತ ಯಕ್ಷಗಾನ ಕಲಾವಿದೆಯ ಆಕರ್ಷಕ ಪ್ರೀ ವೆಡಿಂಗ್ ಶೂಟ್ ; ಯಕ್ಷ ಶೈಲಿಯಲ್ಲೇ ಫೋಟೋಗೆ ಫೋಸ್ ಕೊಟ್ಟ ಕಾವ್ಯಶ್ರೀ ಅಜೇರು..! Exclusive ಫೋಟೋಗಳು – ಕಹಳೆ ನ್ಯೂಸ್

ನಾಳೆ ಹಸೆಮಣೆ ಏರಲಿರುವ ತೆಂಕುತಿಟ್ಟು ಯಕ್ಷಗಾನ ಪರಂಪರೆಯಲ್ಲಿ ಭಾಗವತಿಕೆಯ ಮೂಲಕವೇ ಹೊಸ ಚಾಪನ್ನು ಮೂಡಿಸಿದ ಖ್ಯಾತ ಕಲಾವಿದೆ ಕಾವ್ಯಶ್ರೀ ನಾಯಕ್ ತಮ್ಮ ವೈವಾಹಿಕ ಜೀವನಕ್ಕೆ ನಾಳೆ ಕಾಲಿಡಲಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪ್ರೀ ವೆಡ್ಡಿಂಗ್ ಶೂಟ್ ನ ಆಕರ್ಶಕ ಫೋಟೋಗಳನ್ನು ತಮ್ಮ ವಾಟ್ಸಾಪ್ ಸ್ಟೇಟ್ಸ್ ನಲ್ಲಿ ಹಾಕಿದ್ದು, ಯಕ್ಷಗಾನ ಶೈಲಿಯಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ. Exclusive Photos :...
ಯಕ್ಷಗಾನ / ಕಲೆ

ಯುವ ಯಕ್ಷಗಾನ ಕಲಾವಿದ ಕಡಬ ವಿನಯ ಆಚಾರ್ಯ ಇನ್ನಿಲ್ಲ – ಕಹಳೆ ನ್ಯೂಸ್

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಯುವ ಕಲಾವಿದ ಕಡಬ ವಿನಯ ಆಚಾರ್ಯ ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು. ಅವರಿಗೆ 33 ವರ್ಷ ವಯಸ್ಸಾಗಿತ್ತು. ಮದ್ದಲೆಗಾರನಾಗಿ ಯಕ್ಷ ರಂಗದಲ್ಲಿ ಪ್ರಸಿದ್ದಿಯಾಗಿದ್ದ ವಿನಯ ಆಚಾರ್ಯ ಅವರು  ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತಂದೆ ಕಡಬ ನಾರಾಯಣ ಆಚಾರ್ಯ ಅವರು ಪ್ರಸಿದ್ಧ ಮದ್ದಲೆಗಾರರಾಗಿದ್ದರು.  ಯುವ ಪ್ರತಿಭಾನ್ವಿತ, ಭರವಸೆಯ ಮದ್ದಲೆಗಾರರಾಗಿದ್ದ ಕಡಬ ವಿನಯ ಆಚಾರ್ಯ ಹೊಸನಗರ, ಎಡನೀರು, ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಅಸೌಖ್ಯದಿಂದಾಗಿ ಕಳೆದ...
ಯಕ್ಷಗಾನ / ಕಲೆ

Big Breaking : ರಸರಾಗ ಚಕ್ರವರ್ತಿ ರಾಘವೇಂದ್ರ ಮಯ್ಯ ಹಾಲಾಡಿ ತೆಂಕುತಿಟ್ಟಿನ ದೇಂತಡ್ಕ ಮೇಳದಲ್ಲಿ…! – ಕಹಳೆ ನ್ಯೂಸ್

ಪುತ್ತೂರು : ಬಡಗುತಿಟ್ಟು ಯಕ್ಷಗಾನ ರಂಗದ ಅಗ್ರಮಾನ್ಯ ಭಾವಗತರು ಸ್ನೇಹಜೀವಿ ರಸರಾಗ ಚಕ್ರವರ್ತಿ ಬಿರುದಾಂಕಿತ ರಾಘವೇಂದ್ರ ಮಯ್ಯ ಹಾಲಾಡಿ ತೆಂಕುತಿಟ್ಟಿನಲ್ಲಿ ಛತ್ರಪತಿ ಶಿವಾಜಿಯಂತಹ ಶ್ರೇಷ್ಠ ಪ್ರಸಂಗವನ್ನು ಕಾಣಿಕೆಯಾಗಿ ನೀಡಿ ಜನಮನ ರಂಜಿಸಿದ ಅಗ್ರಜ ಮೇಳ ದೇಂತಡ್ಕ ಮೇಳದಲ್ಲಿ ತಿರುಗಾಟ ನಡೆಸಲಿದ್ದಾರೆ ಎಂದು ಮೇಳದ ಮುಖ್ಯಸ್ಥರಾದ ಶ್ಯಾಮ್ ಭಟ್ ತಿಳಿದಿದ್ದಾರೆ. ಯಕ್ಷಗಾನ ಪ್ರದರ್ಶನಗಳಿಗಾಗಿ ಸಂಪರ್ಕಿಸಿ : ಶ್ಯಾಮ್ ಭಟ್ - 9964157352...
ಯಕ್ಷಗಾನ / ಕಲೆಸುದ್ದಿ

ಯಕ್ಷಗಾನದ ಮಾರ್ಧನ್ಯ ಭಾಗವತ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಭೆ – ಕಹಳೆ ನ್ಯೂಸ್

2 ಜೂನ್ 2019ರ ಭಾನುವಾರ ಸಂಜೆ 4 ಗಂಟೆಗೆ ಹವ್ಯಕ ಭವನ ಮಲ್ಲೇಶ್ವರಂನಲ್ಲಿ ನಾದ ಬ್ರಹ್ಮನಲ್ಲಿ ಲೀನರಾದ ಯಕ್ಷಗಾನದ ಮಾರ್ಧನ್ಯ ಭಾಗವತರಾದ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕವ್ಯಾಂಜಲಿ, ಪುಷ್ಪಾಂಜಲಿ, ಗಾನಾಂಜಲಿ, ಭಾವಾಂಜಲಿ, ನಾಟ್ಯಾಂಜಲಿಯೊಂದಿಗೆ ಗೌರವ ಸಮರ್ಪಣೆ ಗೊಳಿಸಲಾಗುವುದು....
ಯಕ್ಷಗಾನ / ಕಲೆಸುದ್ದಿ

Breaking News : ಅಲ್ಪಕಾಲದ ಅಸೌಖ್ಯದಿಂದ ಹಿರಿಯ ಯಕ್ಷಗಾನ ಕಲಾವಿದ, ಗಣೇಶ ಕಲಾವೃಂದ ಪೈವಳಿಕೆಯ ಸ್ಥಾಪಕ ದೇವಕಾನ ಕೃಷ್ಣ ಭಟ್ ನಿಧನ – ಕಹಳೆ ನ್ಯೂಸ್

ಬಾಯಾರು : ನಿವೃತ್ತ ಅಧ್ಯಾಪಕ, ಹಿರಿಯ ಯಕ್ಷಗಾನ ಕಲಾವಿದ, ಗಣೇಶ ಕಲಾವೃಂದ ಪೈವಳಿಕೆಯ ಸ್ಥಾಪಕ ದೇವಕಾನ ಕೃಷ್ಣ ಭಟ್ ಅವರು ಅಲ್ಪಕಾಲದ ಅಸೌಖ್ಯದಿಂದ ರಾತ್ರಿ 1-30 ಕ್ಕೆ ನಿಧನರಾಗಿದ್ದಾರೆ.   ಯಕ್ಷಗಾನ ರಂಗದಲ್ಲಿ ಇವರ ಸೇವೆ ಅವಿಸ್ಮರಣೀಯ. ಇವರ ಅಗಲುವಿಕೆ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ....
ಯಕ್ಷಗಾನ / ಕಲೆ

ಮೋದಿ ಮತ್ತೆ ಪ್ರಧಾನಿಯಾಗುವ ವಿಶ್ವಾಸ ; ಫಲಿತಾಂಶದ ಮರುದಿನವೇ ಮಂಗಳೂರಿನಲ್ಲಿ ಕಟೀಲು ದೇವಿಗೆ ಹರಕೆಯ ಯಕ್ಷಗಾನ – ಕಹಳೆ ನ್ಯೂಸ್

ಮಂಗಳೂರು: ದೇಶದಲ್ಲಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ವಿಶ್ವಾಸದಲ್ಲಿ ಫಲಿತಾಂಶ ಪ್ರಕಟವಾಗುವ ಮುನ್ನವೇ ವಿಜಯ ಸಂಕಲ್ಪ ಈಡೇರಿದ ಸಂಭ್ರಮಾಚರಣೆಗೆ ಯಕ್ಷಗಾನ ಬುಕ್ಕಿಂಗ್‌ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ದೇಶಾದ್ಯಂತ ಲೋಕಸಭಾ ಚುನಾವಣೆ ಕಾವೇರಿದ್ದು, 4ನೇ ಹಂತದ ಚುನಾವಣೆ ಮುಗಿದು 5ನೇ ಹಂತದ ಚುನಾವಣೆ ಸೋಮವಾರ ನಡೆದಿದೆ. ಇನ್ನೂ ಎರಡು ಹಂತದ ಚುನಾವಣೆ ಬಾಕಿಯಿದ್ದು, ದೇಶದ ಜನತೆ ಚುನಾವಣಾ ಫಲಿತಾಂಶಕ್ಕೆ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.   ಆದರೆ ಈತನ್ಮಧ್ಯೆ ಮಂಗಳೂರಿನಲ್ಲಿ 'ನಮೋ ಎಗೈನ್‌, ನಮೋ ಫಿರ್‌ಸೇ,...
ಯಕ್ಷಗಾನ / ಕಲೆಸುದ್ದಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಗೆ ಅಟ್ಲೂರು ಕಲಾವತಿ ವೆಂಕಟಕೃಷ್ಣಯ್ಯರರಿಂದ ದೇಣಿಗೆ ಹಸ್ತಾಂತರ – ಕಹಳೆ ನ್ಯೂಸ್

ಸುಳ್ಯ : ಅಟ್ಲೂರಿನಲ್ಲಿ ನಡೆದ ಇಪ್ಪತ್ತೈದನೇ ವರ್ಷದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೆ ಹತ್ತು ಸಾವಿರದ ದೇಣಿಗೆಯನ್ನು ಕಲಾವತಿ ವೆಂಕಟಕೃಷ್ಣಯ್ಯ ಅಟ್ಲೂರು ಅವರ ಕುಟುಂಬದ ಪರವಾಗಿ ಪಟ್ಲ ಸತೀಶ್ ಶೆಟ್ಟಿಯವರಿಗೆ ಹಸ್ತಾಂತರ ಮಾಡಿದರು. ಈ ಸಂಧರ್ಭದಲ್ಲಿ ರವಿಪ್ರಕಾಶ್ ಅಟ್ಲೂರು, ವಲ್ಲೀಶ ಅಟ್ಲೂರು ಉಪಸ್ಥಿತರಿದ್ದರು....
ಯಕ್ಷಗಾನ / ಕಲೆ

ಜೂನ್ 16ರಂದು ಉಪ್ಪಿನಂಗಡಿಯಲ್ಲಿ ಯಕ್ಷ ಸಂಭ್ರಮ – 2018 ; ಕಟೀಲು, ಉಪ್ಪಿನಂಗಡಿ ದೇವಸ್ಥಾನಗಳಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಯಕ್ಷ ಸಂಗಮ ಉಪ್ಪಿನಂಗಡಿಯ ಯಕ್ಷ ಸಂಭ್ರಮ 2018 ರ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ; ಆಮಂತ್ರಣ ಬಿಡುಗಡೆ ಯಕ್ಷಗಾನದ ಅದಿ ದೇವತೆ ಕಟೀಲು ದೇವಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಅತ್ರಿಜಾಲು ಕೃಷ್ಣಕುಮಾರ್ ಭಟ್, ವಿನೀತ್ ಶಗ್ರಿತ್ತಾಯ, ಪ್ರವೀಣ ಆಳ್ವ, ಶಶಿಧರ ನೆಕ್ಕಿಲಾಡಿ, ರವೀಶ.ಎಚ್.ಟಿ ಉಪಸ್ಥಿತರಿದ್ದರು. ಉಪ್ಪಿನಂಗಡಿ ದೇವಸ್ಥಾನದ...
1 11 12 13 14
Page 13 of 14