ಶ್ರೀ ಗೆಜ್ಜೆಗಿರಿ ಮೇಳ ಇಂದಿನಿಂದ ದಿಗ್ವಿಜಯ ; ‘ಶ್ರೀಆದಿ ಧೂಮಾವತಿ, ಶ್ರೀದೇಯಿ ಬೈದೆತಿ ಕೃಪಾಷೋಷಿತ ಯಕ್ಷಗಾನ ಮಂಡಳಿ’ ಎಂಬ ನೂತನ ಯಕ್ಷಗಾನ ಮೇಳದ ಯಾನ ಆರಂಭ – ಕಹಳೆ ನ್ಯೂಸ್
ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನಬಿತ್ತಲ್ನಲ್ಲಿ ನಿರ್ಮಾಣಗೊಂಡಿದ್ದ ದೇಯಿ ಬೈದೆತಿ, ಕೋಟಿ ಚೆನ್ನಯರ ಭವ್ಯ ಕ್ಷೇತ್ರದಲ್ಲಿ ಎರಡೂವರೆ ವರ್ಷದ ಹಿಂದೆ ಲಕ್ಷಾಂತರ ಮಂದಿಯ ಸೇರುವಿಕೆಯೊಂದಿಗೆ ನಡೆದಿದ್ದ ಬ್ರಹ್ಮಕಲಶೋತ್ಸವ ಧಾರ್ಮಿಕ ಪರಂಪರೆಯಲ್ಲಿ ಇತಿಹಾಸ ಸೃಷ್ಟಿಸಿತ್ತು. ಇದೀಗ ಈ ಕ್ಷೇತ್ರದ ಮೂಲಕ ತುಳುನಾಡಿನ ಗಂಡು ಕಲೆಯಾದ ಯಕ್ಷಗಾನದ ಗೆಜ್ಜೆ ನಾದದ ಸಾಂಸ್ಕೃತಿಕ ಅನಾವರಣದತ್ತ ಹೆಜ್ಜೆಯಿಟ್ಟಿದೆ. ಗೆಜ್ಜೆಗಿರಿ ಕ್ಷೇತ್ರದಿಂದ ‘ಶ್ರೀಆದಿ ಧೂಮಾವತಿ, ಶ್ರೀದೇಯಿ ಬೈದೆತಿ ಕೃಪಾಷೋಷಿತ ಯಕ್ಷಗಾನ ಮಂಡಳಿ’ ಎಂಬ ನೂತನ ಯಕ್ಷಗಾನ...







