Friday, March 6, 2026

ಮಂಜೇಶ್ವರ

ಕಾಸರಗೋಡುದಕ್ಷಿಣ ಕನ್ನಡಪುತ್ತೂರುಮಂಜೇಶ್ವರಸುದ್ದಿಸುಳ್ಯ

ದಕ್ಷಿಣ ಕನ್ನಡ ಜಿಲ್ಲೆಗೆ ಝಿಕಾ ವೈರಸ್ ಆತಂಕ | ಕೇರಳ ಗಡಿಭಾಗದಲ್ಲಿ ಭಾರೀ ಕಟ್ಟೆಚ್ಚರ ; ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ 10 ಚೆಕ್‌ಪೋಸ್ಟ್‌ – ಕಹಳೆ ನ್ಯೂಸ್

ಮಂಗಳೂರು, ಜುಲೈ 13: ಕೊರೊನಾ ಮಹಾಮಾರಿಯ ನಡುವೆ ಇದೀಗ ಝಿಕಾ ವೈರಸ್ ಆತಂಕ ಶುರುವಾಗಿದೆ. ಕೇರಳದಲ್ಲಿ ಈ ವೈರಸ್‌ನ ಅಟ್ಟಹಾಸ ಶುರುವಾಗಿರುವುದರಿಂದ ಕೇರಳದ ಜೊತೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ಕೇರಳದ ರೋಗಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಕೊರೊನಾ ಮಹಾಮಾರಿ ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಇದೀಗ ಕೇರಳದಲ್ಲಿ ಝಿಕಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಸದ್ಯ ಕೇರಳದಲ್ಲಿ ಝಿಕಾ ವೈರಸ್...
ಕಾಸರಗೋಡುಮಂಜೇಶ್ವರಸುದ್ದಿ

ನಾಳೆ ಹೊರಬೀಳಲಿದೆ ಕೇರಳ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಭವಿಷ್ಯ ; ಮಂಜೇಶ್ವರದಲ್ಲಿ ಕೆ. ಸುರೇಂದ್ರನ್ ಮತ್ತು ಕಾಸರಗೋಡಿನಲ್ಲಿ ಕೆ. ಶ್ರೀಕಾಂತ್ ಗೆಲುವು ಬಹುತೇಕ ಖಚಿತ – ಕಹಳೆ ನ್ಯೂಸ್

ಕಾಸರಗೋಡು, ಮೇ 01  : ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಸಂಜೆಯೊಳಗೆ ಪೂರ್ಣ ಫಲಿತಾಂಶ ಹೊರಬೀಳಲಿದೆ. ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ನಡೆಯಲಿದೆ.   ಮಂಜೇಶ್ವರ - ಕುಂಬಳೆ ಹಯರ್ ಸೆಕಂಡರಿ ಶಾಲೆ, ಕಾಸರಗೋಡು - ಕಾಸರಗೋಡು ಸರಕಾರಿ ಕಾಲೇಜು, ಉದುಮ - ಪೆರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಕಾಞಂಗಾಡ್ - ನೆಹರೂ ಕಾಲೇಜು ಪಡನ್ನಕಾಡ್‌, ತೃಕ್ಕರಿಪುರ - ತೃಕ್ಕರಿಪುರ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ...
ಕಾಸರಗೋಡುಮಂಜೇಶ್ವರಸುದ್ದಿ

Shocking News : ಕಾಸರಗೋಡು ಜಿಲ್ಲೆಯಲ್ಲಿ ಇಂದು ( ಎಪ್ರಿಲ್ 26 ) ಒಂದೇ ದಿನ 1,086 ಮಂದಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಕಾಸರಗೋಡು, ಎ.26 : ಜಿಲ್ಲೆಯಲ್ಲಿ ಸೋಮವಾರ 1,086 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದುವರೆಗೆ 44, 170 ಮಂದಿಗೆ ಸೋಂಕು ದೃಢಪಟ್ಟಿದೆ.   ಈ ನಡುವೆ ಸೋಮವಾರ 424 ಮಂದಿ ಗುಣಮುಖರಾಗಿದ್ದಾರೆ. 12 ಆರೋಗ್ಯ ಸಿಬ್ಬಂದಿಗಳಿಗೂ ಸೋಂಕು ಪತ್ತೆಯಾಗಿದ್ದು, 1,034 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಸದ್ಯ 8,608 ಮಂದಿ ಚಿಕಿತ್ಸೆಯಲ್ಲಿದ್ದಾರೆ. 35, 209 ಮಂದಿ ನಿಗಾದಲ್ಲಿದ್ದು, ಒಟ್ಟು 11, 321 ಮಂದಿ ನಿಗಾದಲ್ಲಿದ್ದಾರೆ....
ಕಾಸರಗೋಡುಕ್ರೈಮ್ಮಂಜೇಶ್ವರಸುದ್ದಿ

Breaking News : ಆರ್ ಎಸ್ ಎಸ್ ಮುಖಂಡ, ಮಂಗಳೂರು ವಿಭಾಗ ಸಂಘಚಾಲಕ್ ಗೋಪಾಲ್ ಚಟ್ಟಿಯಾರ್ ಮನೆಗೆ ದುಷ್ಕರ್ಮಿಗಳಿಂದ ದಾಳಿ, ಬೆಂಕಿ ಹಚ್ಚಲು ಯತ್ನ – ಕಹಳೆ ನ್ಯೂಸ್

ಮಂಜೇಶ್ವರ : ಆರ್ ಎಸ್ ಎಸ್ ಹಿರಿಯ ಮುಖಂಡ, ಮಂಗಳೂರು ವಿಭಾಗ ಸಂಘಚಾಲಕರಾದ ಗೋಪಾಲ್ ಚಟ್ಟಿಯಾರ್ ಮನೆಯ ಮೇಲೆ ದುಷ್ಕರ್ಮಿಗಳ ದಾಳಿಯತ್ನ ನಡೆಸಿದ್ದಾರೆ. ಮಂಜೇಶ್ವರ ತಾಲೂಕಿನ ಪೆರ್ಲದ, ಬಜಕ್ಲೂಡ್ಲು ರಸ್ತೆಯಲ್ಲಿರುವ ಚೆಟ್ಟಿಯಾರ್ ಮನೆಗೆ ಬಂದ ಪುಂಡರು ರಾತ್ರಿ ಬುಲೆಟ್ ಬೈಕ್ ಗೆ ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ್ದು, ಪೆಟ್ರೋಲ್ ದಾಳಿ ಹಾಗೂ ಅಂಗಳದಲ್ಲಿ ನಿಲ್ಲಿಸಿದ ಸ್ವಿಫ್ಟ್ ಕಾರಿಗೆ ಕಲ್ಲೆಸೆತದು ಹಾನಿಗೊಳಿಸಿದ ಘಟನೆ ವರದಿಯಾಗಿದೆ. ಮಂಜೇಶ್ವರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ...
ಮಂಜೇಶ್ವರ

ಮಾರ್ಚ್ 26 ರಂದು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದೂವರೆ ಕ್ವಿಂಟಾಲ್ ಗಾಂಜಾ ವಶ ; ಮೂವರು ಆರೋಪಿಗಳು ಪರಾರಿ-ಕಹಳೆ ನ್ಯೂಸ್

ಮಂಜೇಶ್ವರ : ಮಾರ್ಚ್ 26 ರಂದು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದೂವರೆ ಕ್ವಿಂಟಾಲ್ ಗಾಂಜಾ ಮತ್ತು 50 ಗ್ರಾಂ ಮಾದಕ ವಸ್ತುವನ್ನು ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು , ಮೂವರು ಪರಾರಿಯಾಗಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಮಜೀರ್ ಪಳ್ಳ ಕೊಳ್ಯೂರಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಓರ್ವನನ್ನು ಬೆನ್ನಟ್ಟಿ ಹಿಡಿದರೂ ಇತರ ಮೂವರು ಪರಾರಿಯಾದರು. ಕಾರನ್ನು ತಪಾಸಣೆ ನಡೆಸಿದಾಗ ಗಾಂಜಾ ಮತ್ತು ಎಂ...
ಮಂಜೇಶ್ವರ

ಬಿಜೆಪಿ ಮಂಜೇಶ್ವರ ಕಛೇರಿಯಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಚುನಾವಣೆ ತಯಾರಿ ಬಗ್ಗೆ ಕಾರ್ಯಕರ್ತರ ಸಭೆ-ಕಹಳೆ ನ್ಯೂಸ್

ಮಂಜೇಶ್ವರ : ಬಿಜೆಪಿ ಮಂಜೇಶ್ವರ ಕಛೇರಿಯಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಚುನಾವಣೆ ತಯಾರಿ ಬಗ್ಗೆ ಕಾರ್ಯಕರ್ತರ ಸಭೆ ನಡೆಸಿದರು. ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಶಾಸಕರಾದ ಸುನೀಲ್ ಕುಮಾರ್, ರಾಜೇಶ್ ನಾಯ್ಕ್, ಪ್ರಮುಖರಾದ ಸಂತೋಷ್ ರೈ, ಸುರೇಶ್ ಶೆಟ್ಟಿ, ಮಣಿಕಂಠ ರೈ, ಉಪಸ್ಥಿತರಿದ್ದರು....
ಮಂಜೇಶ್ವರ

ಆಮಂತ್ರಣ ಪತ್ರಿಕೆ ಬಿಡುಗಡೆ | ಏಪ್ರಿಲ್ 22, 23ರಂದು ಚನ್ನಿಕುಡೇಲು ತರವಾಡಿನಲ್ಲಿ ಧರ್ಮದೈವ ಶ್ರೀ ಮಲರಾಯಿ ಮತ್ತು ಪರಿವಾರ ದೈವಗಳ ಧರ್ಮ ನೇಮೋತ್ಸವ-ಕಹಳೆ ನ್ಯೂಸ್

ಮಂಜೇಶ್ವರ : ಶ್ರೀ ನಾಗಬ್ರಹ್ಮ, ಮಲರಾಯಿ ಮತ್ತು ಪರಿವಾರ ದೈವಗಳ ಮೂಲಸ್ಥಾನ ಚನ್ನಿಕುಡೇಲು ತರವಾಡಿನಲ್ಲಿ (ಕುಲಾಲ ಉಪ್ಯಾನ್ ಕುಟುಂಬಸ್ಥರ ಮೂಲಸ್ಥಾನ) ಏಪ್ರಿಲ್ 22 ಗುರುವಾರ ಹಾಗೂ ಏಪ್ರಿಲ್ 23 ಶುಕ್ರವಾರ ನಡೆಯಲಿರುವ ಧರ್ಮದೈವ ಶ್ರೀ ಮಲರಾಯಿ ಹಾಗೂ ಪರಿವಾರ ದೈವಗಳ ಧರ್ಮ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆದಿತ್ಯವಾರ ನಡೆಯಿತು. ಏಪ್ರಿಲ್ 22 ಗುರುವಾರ ಬೆಳಗ್ಗೆ 8.30ಕ್ಕೆ ನಾಗ ತಂಬಿಲ, ಬ್ರಹ್ಮಗುರು ತಂಬಿಲ, 7ಕ್ಕೆ ಧರ್ಮದೈವ ಶ್ರೀ ಮಲರಾಯಿಯ...
ಮಂಜೇಶ್ವರಸುದ್ದಿ

ಜ್ಯುವೆಲ್ಲರಿ ವಂಚನೆ ಪ್ರಕರಣ ; ಮಂಜೇಶ್ವರ ಶಾಸಕ ಕಮರುದ್ದೀನ್‌ ಅಂದರ್ ; ನಿರಂತರ ಬಿಜೆಪಿ ಹೋರಾಟಕ್ಕೆ ಸಂದ ವಿಜಯ – ಕಹಳೆ ನ್ಯೂಸ್

ಕಾಸರಗೋಡು, ನ. 07 : ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್‌ರನ್ನು ಬಂಧಿಸಲಾಗಿದೆ. ಇಂದು ಬೆಳಿಗ್ಗೆಯಿಂದ ವಿಶೇಷ ತನಿಖಾ ತಂಡ ಜಿಲ್ಲಾ ಪೊಲೀಸ್ ಕೇಂದ್ರದಲ್ಲಿ ವಿಚಾರಣೆ ನಡೆಸಿತ್ತು. ವಿಚಾರಣೆಯ ಬಳಿಕ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಮರುದ್ದೀನ್‌ರನ್ನು ಬಂಧಿಸಿರುವುದಾಗಿ ಎ. ಎಸ್.ಪಿ ವಿವೇಕ್ ಕುಮಾರ್‌ ತಿಳಿಸಿದರು. ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪೆನಿ ಹೆಸರಿನಲ್ಲಿ ಸುಮಾರು 120 ಕೋಟಿ ರೂ. ಗಳಷ್ಟು ವಂಚನೆ ನಡೆದಿದ್ದು, ಸುಮಾರು...
1 2 3 4
Page 3 of 4