ಕುಲಾಲ ಕುಂಬಾರ ವೇದಿಕೆ ಪಣೋಲಿಬೈಲು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ಎಂ ಪಣೋಲಿಬೈಲ್-ಕಹಳೆ ನ್ಯೂಸ್
ಬಂಟ್ವಾಳ: ಕುಲಾಲ ಕುಂಬಾರರ ವೇದಿಕೆಯ ಅಧ್ಯಕ್ಷರಾದ ರವೀಂದ್ರ ಕುಲಾಲ್ ಕಂದೂರು ಇವರ ಅಧ್ಯಕ್ಷತೆಯಲ್ಲಿ ಜನವರಿ 10ರಂದು ಸಂಜೆ 6.30ಕ್ಕೆ ಪಣೋಲಿಬೈಲು ಇದರ ನಾಲ್ಕನೇ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶ್ರೀ ಕೃಷ್ಣ ಭಜನಾ ಮಂದಿರ ಪಣೋಲಿಬೈಲು ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೊರಗಪ್ಪ ಕುಲಾಲ ಜಾಡಕೋಡಿ, ಗೌರವ ಅಧ್ಯಕ್ಷರಾದ ರಮೇಶ್ ಕುಲಾಲ್, ಗೌರವ ಸಲಹೆಗಾರ ಲಿಂಗಪ್ಪ ಬಂಗೇರ ಕಾರಜೆ, ಉಪಾಧ್ಯಕ್ಷ ರಮೇಶ್ ಎಂ...







