ಕಡುಬಡತನದಲ್ಲಿ ಕಮರಿರುವ ರಾಜೇಶ್ ಕುಟುಂಬಕ್ಕೆ ಆರ್ಥಿಕ ಸಹಾಯ ಬೇಕಾಗಿದೆ-ಕಹಳೆ ನ್ಯೂಸ್
ಬೆಳಂದೂರು: ಕಡಬ ತಾಲೂಕು ಬೆಳಂದೂರು ಗ್ರಾಮದ ಪಟ್ಟೆ ಎಂಬಲ್ಲಿನ ದಿವಂಗತ ಮಾಯಿಲಪ್ಪ ಗೌಡ ಎಂಬವರ ಒಬ್ಬನೇ ಮಗ ರಾಜೇಶ್ (30 ವರ್ಷ) 4 ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ ಎಡಗಾಲು ಮುರಿದು ಮುಖ ಮತ್ತು ತಲೆಗೆ ಗಂಭೀರ ಗಾಯಗಳಾಗಿ ಮಂಗಳೂರಿನ ಎ ಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುಮಾರು 6 ವರ್ಷಗಳಿಂದ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿರುವ 55 ವರ್ಷದ ತಾಯಿ ಸೀತಮ್ಮ ಚಿಕಿತ್ಸೆಯ ಎಲ್ಲಾ ಖರ್ಚುವೆಚ್ಚಗಳನ್ನು...







