Wednesday, March 11, 2026

ಸಿನಿಮಾ

ಸಿನಿಮಾಸುದ್ದಿ

ಶ್ರುತಿ ಹಾಸನ್ ಲವ್ ಬ್ರೇಕಪ್..! – ಕಹಳೆ ನ್ಯೂಸ್

ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಪ್ರೇಮ ಕಥೆ ದುಃಖದಲ್ಲಿ ಕೊನೆಯಾಗಿದೆ. ಹಾಗಂತ ಇದು ಅವರ ನಟಿಸುತ್ತಿರುವ ಸಿನಿಮಾದ ಕಥೆ ಎಂದುಕೊಳ್ಳಬೇಡಿ! ಇದು ಅವರ ನಿಜ ಜೀವನದ ಕಥೆ. ಲಂಡನ್ ಮೂಲದ ಮೈಕೆಲ್ ಕಾರ್ಸೇಲ್ ಹಾಗೂ ಶ್ರುತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಾಕಷ್ಟು ಬಾರಿ ಕ್ಯಾಮರಾ ಕಣ್ಣಿಗೂ ಅವರು ಸಿಕ್ಕಿದ್ದರು. ಆದರೆ, ಈ ಬಗ್ಗೆ ಅವರು ಮಾಧ್ಯಮದ ಎದುರು ಬಾಯ್ಬಿಟ್ಟಿರಲಿಲ್ಲ. ಶ್ರುತಿ ಇತ್ತೀಚೆಗೆ ಯಾವುದೇ ಚಿತ್ರಗಳಲ್ಲಿ ಬಣ್ಣ ಹಚ್ಚದೆ ಇರುವುದಕ್ಕೆ...
ಸಿನಿಮಾಸುದ್ದಿ

ಕೆಜಿಎಫ್ 2 ಆಡಿಷನ್‍ಗೆ ಹರಿದು ಬಂತು ಜನಸಾಗರ – ಕಹಳೆ ನ್ಯೂಸ್

ಕಳೆದ ವರ್ಷದ ಅಂತ್ಯಕ್ಕೆ ತೆರೆಕಂಡು ಭಾರತದಾದ್ಯಂತ ಸಂಚಲನ ಸೃಷ್ಠಿಸಿದ್ದ ಕನ್ನಡ ಚಿತ್ರರಂಗದ ಮಹೋನ್ನತ ಚಿತ್ರ ‘ಕೆಜಿಎಫ್ ಚಾಪ್ಟರ್ 1’, ಮುಂದುವರೆದ ಅಧ್ಯಾಯ ಚಾಪ್ಟರ್ 2ಗೆ ಅಣಿಯಾಗುತ್ತಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಬಹುತೇಕ ಪೂರ್ಣಗೊಳಿಸಿರುವ ಚಿತ್ರತಂಡ ಮೇ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಚಿತ್ರತಂಡ ನಿನ್ನೆ ಬೆಂಗಳೂರಿನಲ್ಲಿ 8ರಿಂದ 16 ವರ್ಷದ ಬಾಲಕರಿಗೆ ಹಾಗೂ 25 ವಯಸ್ಸಿನ ತರುಣರಿಗೆ ಆಡಿಷನ್ ಆಯೋಜಿಸಲಾಗಿತ್ತು. ಬೆಳಗ್ಗಿನಿಂದ ಸಂಜೆಯವರೆಗಿದ್ದ...
ಸಿನಿಮಾಸುದ್ದಿ

ಬಾಲಿವುಡ್‍ಗೆ ಕಿರಿಕ್ ಪಾರ್ಟಿ – ಕಹಳೆ ನ್ಯೂಸ್

ಮುಂಬೈ: 2016 ರಲ್ಲಿ ಕಮಾಲ್ ಮಾಡಿದ ಕಿರಿಕ್ ಪಾರ್ಟಿ ಸಿನಿಮಾ ಇದೀಗ ಬಾಲಿವುಡ್ ನಲ್ಲಿ ಸದ್ದು ಮಾಡಲು ರೆಡಿಯಾಗಿದೆ. ಕಿರಿಕ್ ಪಾರ್ಟಿ ನಿಜಕ್ಕೂ ಒಂದು ಅದ್ಬುದ್ಬುತ ಚಿತ್ರ ಅಂತಾ ಅನೇಕ ಮಂದಿ ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಹೀಗೆಯೂ ಒಂದು ಸಿನಿಮಾ ಮಾಡಬಹುದು ಎಂದು ಅಂದುಕೊಂಡಂತ ಚಿತ್ರ. ಅದೆಷ್ಟೋ ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರ ಇದೀಗ ಬಾಲಿವುಡ್ ಗೆ ಕಾಲಿಟ್ಟಿದೆ. ಈ ಚಿತ್ರ ಹಿಂದಿಯಲ್ಲಿ ಈ ಚಿತ್ರ ರೀಮೇಕ್ ಆಗುತ್ತಿದೆ. ಬಾಲಿವುಡ್‍ಗೆ...
ಸಿನಿಮಾಸುದ್ದಿ

ತುಳುನಾಡಿನಲ್ಲಿ ಇದೀಗ ಕಟ್ಟಪ್ಪನದ್ದೆ ಕಾರುಬಾರು – ಕಹಳೆ ನ್ಯೂಸ್

ತುಳುನಾಡಿನಲ್ಲಿ ಇದೀಗ ಕಟ್ಟಪ್ಪನದ್ದೆ ಕಾರುಬಾರು. ಯುವ ನಿರ್ದೇಶಕ ಜೆ.ಪಿ. ತೂಮಿನಾಡ್ ನಿರ್ದೇಶನದ ಕಟಪಾಡಿ ಕಟ್ಟಪ್ಪ ಮಾರ್ಚ್ 29ಕ್ಕೆ ತೆರೆ ಕಂಡಿದ್ದು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಕರಾವಳಿ ಮತ್ತು ರಾಜ್ಯಾದ್ಯಂತ 200ಕ್ಕೂ ಹೆಚ್ಚಿನ ಥಿಯೇಟರ್‍ಗಳಲ್ಲಿ ಕಟಪ್ಪ ಸದ್ದು ಮಾಡುತ್ತಿದ್ದು ತುಳು ಪ್ರೇಕ್ಷಕರ ಮನಗೆದ್ದಿದೆ. ವಿದ್ಯಾರ್ಥಿಗಳು, ಯುವಕರು ಈ ಮೂವಿಗೆ ಫಿದಾ ಆಗಿದ್ದು ಚಿತ್ರಮಂದಿರಕ್ಕೆ ದೌಡಾಯಿಸಿದ್ದಾರೆ. ಯುವ ನಿರ್ದೇಶಕ ಜೆ.ಪಿ. ತೂಮಿನಾಡ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ರಾಜೇಶ್ ಬ್ರಹ್ಮಾವರ್ ಈ ಸಿನೆಮಾದ...
ಸಿನಿಮಾಸುದ್ದಿ

‘ಉರಿ ಕಮಾಂಡೋ ಮೇಲೆ ಮಿಲ್ಕಿ ಬ್ಯೂಟಿ ಕಣ್ಣು’ – ಕಹಳೆ ನ್ಯೂಸ್

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸಿಕ್ಕ ಪಟ್ಟೆ ಬ್ಯೂಸಿ ಆಗಿದ್ದಾರೆ. ಬಾಹುಬಲಿ ಚಿತ್ರದ ನಂತರ ಸಿನಿ ಕೆರಿಯರ್‌ನಲ್ಲಿ ಮರುಹುಟ್ಟು ಪಡೆದ ಮಿಲ್ಕಿ ಬ್ಯೂಟಿಗೆ ಕೈತುಂಬ ಆಫರ್‌ಗಳಿವೆ. ಆದರೆ ಯಾವ ಸಿನೆಮಾವನ್ನು ಒಪ್ಪಿಕೊಳ್ಳಬೇಕು,ಯಾವ ಸಿನೆಮಾವನ್ನು ಬಿಡಬೇಕು ಅನ್ನೊದನ್ನ ಯೋಚಿಸೋಕು ಟೈಮ್ ಇಲ್ಲವಾಗಿದೆಯಂತೆ. ಇಷ್ಟೊಂದು ಬ್ಯುಸಿಯಾಗಿರುವ ತಮನ್ನಾ ಸಾಧ್ಯವಾದಷ್ಟು ಬಿಟೌನ್ ಕಡೆಗೇ ಹೆಚ್ಚು ಗಮನ ಕೊಡುತ್ತಿದ್ದಾರೆ. ಆದ್ರೆ ಈ ಮಿಲ್ಕ್ ಬ್ಯೂಟಿ ಬಾಲಿವುಡ್ ನಟ ವಿಕ್ಕಿ ಕೌಶಲ್‌ನ ಮೇಲೆ ಕಣ್ಣಿಟ್ಟಿದ್ದಾರೆ. ಹೌದು, ಇತ್ತೀಚಿಗಷ್ಟೇ...
ಸಿನಿಮಾಸುದ್ದಿ

ದರ್ಶನ್ ಮನೆಗೆ ಕಲ್ಲು ತೂರಾಟ; ಕಾರಣವೇನು ಗೊತ್ತಾ..? – ಕಹಳೆ ನ್ಯೂಸ್

ಬೆಂಗಳೂರು: ನಗರದ ರಾಜ ರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್‍ನಲ್ಲಿರುವ ನಟ ದರ್ಶನ್ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು ಕಾರು ಜಖಂಗೊಂಡಿದೆ. ಮೊನ್ನೆಯಷ್ಟೇ ಸುಮಲತಾ ಅಂಬರೀಷ್ ಅವರನ್ನು ಬೆಂಬಲಿಸಿದ್ದಕ್ಕಾಗಿ ದರ್ಶನ್ ಮತ್ತು ಯಶ್‍ರನ್ನು ಗುರಿಯಾಗಿಸಿಕೊಂಡು ಹಲವರು ಟೀಕೆ ಮಾಡಿದ್ದರು. ಇದೇ ಹಿನ್ನಲೆಯಲ್ಲಿ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆದಿರಬಹುದು ಎಂದು ಶಂಕಿಸಲಾಗಿದೆ. ಇದೀಗ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ದುರ್ಷರ್ಮಿಯೊಬ್ಬ ದರ್ಶನ್ ಮನೆ ಮೇಲೆ ಕಲ್ಲು ತೂರಿ...
ಸಿನಿಮಾಸುದ್ದಿ

‘ಕೇಸರಿ’ ಧಮಾಕ: ಮೊದಲ ದಿನವೇ ದಾಖಲೆ ಗಳಿಕೆ ಕಂಡ ಅಕ್ಷಯ್ ಚಿತ್ರ – ಕಹಳೆ ನ್ಯೂಸ್

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಇಂಡಸ್ಟ್ರಿಯಲ್ಲಿ ಹೊಸ ಬಾಕ್ಸ್ ಅಫೀಸ್ ಸುಲ್ತಾನ್ ಆಗಿ ಮೆರೆಯುತ್ತಿದ್ದಾರೆ. ಖಾನ್ ಮತ್ತು ಕಪೂರ್ ಗಳು ಮಾಡದ ಮೋಡಿಯನ್ನ ಅಕ್ಷಯ್ ಚಿತ್ರಗಳು ಮಾಡುತ್ತಿವೆ. ಬರಿ ನಟನೆಯಲ್ಲಿ ಮಾತ್ರ ಭೇಷ್ ಎನಿಸಿಕೊಳ್ಳುತ್ತಿಲ್ಲ ಅಕ್ಷಯ್. ನಟನೆ ಜೊತೆ ಕಮರ್ಷಿಯಲ್ ಆಗಿಯೂ ಸೂಪರ್ ಸ್ಟಾರ್ ಆಗ್ತಿದ್ದಾರೆ. ಹೌದು, ಅಕ್ಷಯ್ ಕುಮಾರ್ ಚಿತ್ರಗಳು ಈಗ ಬಿಟೌನ್ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕುತ್ತಿದೆ. ಅಕ್ಷಯ್ ಕುಮಾರ್ 'ಕೇಸರಿ' ಟ್ರೈಲರ್ ನಲ್ಲಿ ಇದು ನೆಚ್ಚಿನ...
ಸಿನಿಮಾ

Breaking News : ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ! – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್‍ವುಡ್ ಮಳೆ ಹುಡುಗಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೂಜಾಗಾಂಧಿಯವರು ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಹೌದು. ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ನಟಿ ಪೂಜಾ ಗಾಂಧಿ ಹಾಗೂ ಗದಗ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ 1 ವರ್ಷ ರೂಂ ಬುಕ್ ಮಾಡಿದ್ದರು. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷ...
1 75 76 77 78 79 92
Page 77 of 92