ಹೊಲದಲ್ಲಿ ಸನ್ನಿಲಿಯೋನ್, ರಚಿತರಾಮ್ ಫೋಟೋ ಹಾಕಿದ ರೈತ-ಕಹಳೆ ನ್ಯೂಸ್
ಬೆಳೆಗಳಿಂದ ತುಂಬಿ ತುಳುಕುವ ತೋಟ, ಹೊಲ ಗದ್ದೆಗಳಿಗೆ ಜನರ ದೃಷ್ಟಿ ತಾಗಬಾರದು ಅಥವಾ ಕಾಡು ಪ್ರಾಣಿ, ಪಕ್ಷಿಗಳ ಉಪಟಳ ಇರಬಾರದು ಎಂದು ರೈತರು ದೃಷ್ಟಿ ಗೊಂಬೆ ಹಾಕಿದರೆ ಇಲ್ಲೊಬ್ಬ ರೈತ ನಟಿಯರಾದ ಸನ್ನಿಲಿಯೋನ್ ಮತ್ತು ರಚಿತರಾಮ್ ಅವರ ಬ್ಯಾನರ್ ಹಾಕಿ ಸಾಕಷ್ಟು ಸುದ್ದಿಯಾಗಿದ್ದಾನೆ. ನಟಿಯರಾಗಿ ಕೋಟ್ಯಾಂತರ ಅಭಿಮಾನಿಗಳಿಗೆ ನೆಚ್ಚಿನ ಹೀರೋಯಿನ್ ಆಗಿರುವ ಸನ್ನಿಲಿಯೋನ್ ಹಾಗೂ ರಚಿತರಾಮ್ ಇಲ್ಲೊಬ್ಬ ರೈತನಿಗೆ ದೃಷ್ಟಿಗೊಂಬೆಯಾಗಿದ್ದಾರೆ. ತಾನು ಬೆಳೆದ ಟಮೋಟೋಗೆ ಯಾರ ಕಣ್ಣು ಬೀಳಬಾರದೆಂದು ಈ...







