ಭರತನ್ಯಾಟದಲ್ಲಿ ವೈಭಕರಿಸಿದ ಡಾ.ಚೇತನಾ ರಾಧಾಕೃಷ್ಣ- ಕಹಳೆ ನ್ಯೂಸ್
ಎಲ್ಲರಲ್ಲಿಯೂ ಒಂದಲ್ಲಾ ಒಂದು ರೀತಿಯ ಕಲೆ ಇದ್ದೆ ಇರುತ್ತದೆ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಲು ಸರಿಯಾದ ಸಮಯ ಮತ್ತು ವೇದಿಕೆ ಎಲ್ಲರಿಗೂ ಸಿಕ್ಕಿರುವುದಿಲ್ಲ. ಅಂತಹ ಕಲೆಯನ್ನು ಒಲಿಸಿಕೊಳ್ಳಲು ಸತತ ಪರಿಶ್ರಮ, ಛಲ ನಮ್ಮಲ್ಲಿರಬೇಕು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಜಾಣ್ಮೆ ಇರಬೇಕು ಅಂತಹ ಕಲೆಯನ್ನು ಒಲಿಸಿಕೊಂಡವರಲ್ಲಿ ಡಾ. ಚೇತನಾ ರಾಧಾಕೃಷ್ಣ ಕೂಡ ಒಬ್ಬರು. ಇವರು ಭರತನಾಟ್ಯದ ಓರ್ವ ಪ್ರಸಿದ್ದ ಕಲಾವಿದೆ, ಭರತನ್ಯಾಟದ ಶಿಕ್ಷಕಿಯಾಗಿ, ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ನಾಟ್ಯಕ್ಷೇತ್ರದಲ್ಲಿ ತನ್ನದೇ ಆಗಿರುವ...







